<p><strong>ಉಡುಪಿ:</strong>ಕೊರೊನಾ ಬಗ್ಗೆ ಭಯಬೇಡ; ಜಾಗ್ರತೆ ಇರಲಿ. ಸೋಂಕು ತಗುಲಿದ ಮೇಲೆ ಚಿಂತಿಸುವ ಬದಲು; ಸೋಂಕು ಬಾರದಂತೆ ಎಚ್ಚರವಹಿಸಿದರೆ ವೈಯಕ್ತಿಕವಾಗಿ ಹಾಗೂ ಸಮುದಾಯದ ಹಿತದೃಷ್ಟಿಯಿಂದ ಒಳಿತು ಎಂದರು ವಡಬಾಂಢೇಶ್ವರ ವಾರ್ಡ್ನ ಕೌನ್ಸಿಲರ್ ಯೋಗೀಶ್ ವಿ.ಸಾಲ್ಯಾನ್.</p>.<p>ಕೋವಿಡ್ ವಿರುದ್ಧ ಹೋರಾಡಿ ಗುಣಮುಖರಾಗಿ ಸಧ್ಯ ಹೋಂ ಕ್ವಾರಂಟೈನ್ನಲ್ಲಿರುವ ಯೋಗೀಶ್ ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.</p>.<p>‘ಜುಲೈ 4ರಂದು ಸೋಂಕು ತಗುಲಿ ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಾದಾಗ ಮನಸ್ಸಿನಲ್ಲಿ ಅಳುಕಿತ್ತು. ಆದರೆ, ಅಲ್ಲಿನ ಚಿಕಿತ್ಸಾ ಕ್ರಮ, ವೈದ್ಯರ ಹಾಗೂ ಶುಶ್ರೂಷಕರ ಕಾಳಜಿ ಕಂಡು ಕೊರೊನಾ ಬಗ್ಗೆ ಮನಸ್ಸಿನಲ್ಲಿದ್ದ ಅಳುಕು ಸಂಪೂರ್ಣ ಬದಲಾಯಿತು’.</p>.<p>‘ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಮಹಾಮಾರಿ, ರಣಕೇಕೆ, ರುದ್ರನರ್ತನ ಎಂಬೆಲ್ಲ ವರದಿಗಳನ್ನು ನೋಡಿ ಜನಸಾಮಾನ್ಯರಲ್ಲಿ ಭಯ ತುಂಬಿಕೊಂಡಿದೆ. ಜನರಲ್ಲಿರುವ ಭಯ ನಿವಾರಣೆಯಾದರೆ ಸೋಂಕಿನಿಂದ ಬಹುತೇಕ ಗುಣಮುಖರಾದಂತೆ ಎಂದರು ಯೋಗೀಶ್.</p>.<p>ಕೊರೊನಾ ಬಂದರೆ ಬದುಕು ಮುಗಿಯಿತು ಎಂಬ ಭಯಬೇಡ. ಸೋಂಕಿಗೆ ಹೆದರುವ ಅಗತ್ಯವಿಲ್ಲ. ಮಾನಸಿಕ ಸ್ಥೈರ್ಯವೇ ಕೊರೊನಾಗೆ ಪರಿಣಾಮಕಾರಿ ಔಷಧ’ ಎಂದರು ಅವರು.</p>.<p>ರೋಗದ ಲಕ್ಷಣಗಳು ಆಧರಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ರಕ್ತದೊತ್ತಡ, ಮಧುಮೇಹ ಹಾಗೂ ಇತರೆ ಪರೀಕ್ಷೆಗಳನ್ನು ಮಾಡಲಾಗುತ್ತದೆ. ನಿತ್ಯ ಪೌಷ್ಟಿಕ ಆಹಾರ ನೀಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಾನಸಿಕವಾಗಿ ಸ್ಥೈರ್ಯ ತುಂಬುತ್ತಾರೆ ಎಂದು ಆಸ್ಪತ್ರೆಯ ಚಿಕಿತ್ಸಾ ವಿಧಾನವನ್ನು ವಿವರಿಸಿದರು.</p>.<p>‘ಜನಪ್ರತಿನಿಧಿಯಾಗಿ ಸದಾ ಜನಗಳ ಮಧ್ಯೆ ಇರುತ್ತಿದ್ದ ನನಗೆ ಆಸ್ಪತ್ರೆಯಲ್ಲಿ ಒಂಟಿಯಾಗಿರುವುದು ಸ್ವಲ್ಪ ಕಷ್ಟವಾಯಿತು. ಅಲ್ಲಿಂದಲೇ ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ರೂಢಿಸಿಕೊಂಡ ಬಳಿಕ ಕೊರೊನಾ ಬಗ್ಗೆ ಯೋಚಿಸಲೂ ಸಮಯ ಸಿಗಲಿಲ್ಲ’ ಎಂದರು ಅವರು.</p>.<p>ಆಸ್ಪತ್ರೆಯಲ್ಲಿದ್ದುಕೊಂಡು ಕರಾವಳಿಯ ಮತ್ಸ್ಯೋದ್ಯಮದ ಮೇಲೆ ಕೊರೊನಾ ಬೀರಿರುವ ಪರಿಣಾಮ ಹಾಗೂ ಮುಂದೆ ಸೋಂಕಿನ ವಿರುದ್ಧ ಹೋರಾಡುತ್ತಲೇ ಮುಂದೆ ಬದುಕು ಕೊಟ್ಟಿಕೊಳ್ಳಬೇಕಾದ ಅನಿವಾರ್ಯತೆಯ ಕುರಿತು ವಿಡಿಯೋ ಮಾಡಿದ್ದೇನೆ. ಇದು ತುಂಬಾ ಖುಷಿಕೊಟ್ಟಿತು ಎಂದರು ಯೋಗೀಶ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong>ಕೊರೊನಾ ಬಗ್ಗೆ ಭಯಬೇಡ; ಜಾಗ್ರತೆ ಇರಲಿ. ಸೋಂಕು ತಗುಲಿದ ಮೇಲೆ ಚಿಂತಿಸುವ ಬದಲು; ಸೋಂಕು ಬಾರದಂತೆ ಎಚ್ಚರವಹಿಸಿದರೆ ವೈಯಕ್ತಿಕವಾಗಿ ಹಾಗೂ ಸಮುದಾಯದ ಹಿತದೃಷ್ಟಿಯಿಂದ ಒಳಿತು ಎಂದರು ವಡಬಾಂಢೇಶ್ವರ ವಾರ್ಡ್ನ ಕೌನ್ಸಿಲರ್ ಯೋಗೀಶ್ ವಿ.ಸಾಲ್ಯಾನ್.</p>.<p>ಕೋವಿಡ್ ವಿರುದ್ಧ ಹೋರಾಡಿ ಗುಣಮುಖರಾಗಿ ಸಧ್ಯ ಹೋಂ ಕ್ವಾರಂಟೈನ್ನಲ್ಲಿರುವ ಯೋಗೀಶ್ ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.</p>.<p>‘ಜುಲೈ 4ರಂದು ಸೋಂಕು ತಗುಲಿ ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಾದಾಗ ಮನಸ್ಸಿನಲ್ಲಿ ಅಳುಕಿತ್ತು. ಆದರೆ, ಅಲ್ಲಿನ ಚಿಕಿತ್ಸಾ ಕ್ರಮ, ವೈದ್ಯರ ಹಾಗೂ ಶುಶ್ರೂಷಕರ ಕಾಳಜಿ ಕಂಡು ಕೊರೊನಾ ಬಗ್ಗೆ ಮನಸ್ಸಿನಲ್ಲಿದ್ದ ಅಳುಕು ಸಂಪೂರ್ಣ ಬದಲಾಯಿತು’.</p>.<p>‘ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಮಹಾಮಾರಿ, ರಣಕೇಕೆ, ರುದ್ರನರ್ತನ ಎಂಬೆಲ್ಲ ವರದಿಗಳನ್ನು ನೋಡಿ ಜನಸಾಮಾನ್ಯರಲ್ಲಿ ಭಯ ತುಂಬಿಕೊಂಡಿದೆ. ಜನರಲ್ಲಿರುವ ಭಯ ನಿವಾರಣೆಯಾದರೆ ಸೋಂಕಿನಿಂದ ಬಹುತೇಕ ಗುಣಮುಖರಾದಂತೆ ಎಂದರು ಯೋಗೀಶ್.</p>.<p>ಕೊರೊನಾ ಬಂದರೆ ಬದುಕು ಮುಗಿಯಿತು ಎಂಬ ಭಯಬೇಡ. ಸೋಂಕಿಗೆ ಹೆದರುವ ಅಗತ್ಯವಿಲ್ಲ. ಮಾನಸಿಕ ಸ್ಥೈರ್ಯವೇ ಕೊರೊನಾಗೆ ಪರಿಣಾಮಕಾರಿ ಔಷಧ’ ಎಂದರು ಅವರು.</p>.<p>ರೋಗದ ಲಕ್ಷಣಗಳು ಆಧರಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ರಕ್ತದೊತ್ತಡ, ಮಧುಮೇಹ ಹಾಗೂ ಇತರೆ ಪರೀಕ್ಷೆಗಳನ್ನು ಮಾಡಲಾಗುತ್ತದೆ. ನಿತ್ಯ ಪೌಷ್ಟಿಕ ಆಹಾರ ನೀಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಾನಸಿಕವಾಗಿ ಸ್ಥೈರ್ಯ ತುಂಬುತ್ತಾರೆ ಎಂದು ಆಸ್ಪತ್ರೆಯ ಚಿಕಿತ್ಸಾ ವಿಧಾನವನ್ನು ವಿವರಿಸಿದರು.</p>.<p>‘ಜನಪ್ರತಿನಿಧಿಯಾಗಿ ಸದಾ ಜನಗಳ ಮಧ್ಯೆ ಇರುತ್ತಿದ್ದ ನನಗೆ ಆಸ್ಪತ್ರೆಯಲ್ಲಿ ಒಂಟಿಯಾಗಿರುವುದು ಸ್ವಲ್ಪ ಕಷ್ಟವಾಯಿತು. ಅಲ್ಲಿಂದಲೇ ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ರೂಢಿಸಿಕೊಂಡ ಬಳಿಕ ಕೊರೊನಾ ಬಗ್ಗೆ ಯೋಚಿಸಲೂ ಸಮಯ ಸಿಗಲಿಲ್ಲ’ ಎಂದರು ಅವರು.</p>.<p>ಆಸ್ಪತ್ರೆಯಲ್ಲಿದ್ದುಕೊಂಡು ಕರಾವಳಿಯ ಮತ್ಸ್ಯೋದ್ಯಮದ ಮೇಲೆ ಕೊರೊನಾ ಬೀರಿರುವ ಪರಿಣಾಮ ಹಾಗೂ ಮುಂದೆ ಸೋಂಕಿನ ವಿರುದ್ಧ ಹೋರಾಡುತ್ತಲೇ ಮುಂದೆ ಬದುಕು ಕೊಟ್ಟಿಕೊಳ್ಳಬೇಕಾದ ಅನಿವಾರ್ಯತೆಯ ಕುರಿತು ವಿಡಿಯೋ ಮಾಡಿದ್ದೇನೆ. ಇದು ತುಂಬಾ ಖುಷಿಕೊಟ್ಟಿತು ಎಂದರು ಯೋಗೀಶ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>