<p><strong>ಉಡುಪಿ:</strong> ಜರ್ಮನಿಯ ಮ್ಯುನಿಚ್ ನಗರದಲ್ಲಿ ಅಪರಿಚಿತ ವ್ಯಕ್ತಿಯಿಂದ ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಕುಂದಾಪುರ ತಾಲ್ಲೂಕಿನ ಪ್ರಶಾಂತ್ ಅವರ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಪ್ರಶಾಂತ್ ಅವರ ಮೃತದೇಹವನ್ನು ನೋಡಲು ಸರ್ಕಾರ ಆದಷ್ಟುಬೇಗ ವ್ಯವಸ್ಥೆ ಮಾಡಬೇಕು ಎಂದು ಕಂಬನಿ ಮಿಡಿದಿದೆ.</p>.<p>ಈ ಸಂಬಂಧಉಡುಪಿಯಲ್ಲಿರುವ ಪ್ರಶಾಂತ್ ಸಹೋದರಿ ಸಾಧನಾ ಪತಿ ಶ್ರೀನಿವಾಸ ಶೇರಿಗಾರ್ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಪ್ರಶಾಂತ್ ಅವರನ್ನು ಕೊಂದಿದ್ದು ಯಾರು, ಯಾವ ಉದ್ದೇಶಕ್ಕೆ ಹತ್ಯೆ ಮಾಡಲಾಗಿದೆ ಎಂಬ ವಿಚಾರ ಬಹಿರಂಗವಾಗಬೇಕು. ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ಶ್ರೀನಿವಾಸ್ ಶೇರಿಗಾರ್ ಒತ್ತಾಯಿಸಿದರು.</p>.<p>ಪ್ರಶಾಂತ್ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರ್ ಪದವಿ ಪಡೆದಿದ್ದರು. ಬಳಿಕ ಬೆಂಗಳೂರು ಹಾಗೂ ಹೈದರಾಬಾದ್ನ ಖಾಸಗಿ ಕಂಪೆನಿಗಳಲ್ಲಿ ಕೆಲಕಾಲ ಕೆಲಸ ಮಾಡಿದ್ದರು ಎಂದು ಮಾಹಿತಿ ಹಂಚಿಕೊಂಡರು.</p>.<p>ಸತ್ಯಂ ಕಂಪ್ಯೂಟರ್ಸ್ ಕಂಪೆನಿಯ ಮೂಲಕ ಜರ್ಮನಿಯಲ್ಲಿ ಕೆಲಸ ಮಾಡುವ ಅವಕಾಶ ಪ್ರಶಾಂತ್ ಅವರಿಗೆ ದೊರೆಯಿತು. 2013ರಲ್ಲಿ ಪತ್ನಿಯ ಜತೆಗೆ ಜರ್ಮನಿಗೆ ಹೋಗಿದ್ದ ಅವರು 15 ವರ್ಷಗಳಿಂದ ಅಲ್ಲಿಯೇ ನೆಲಸಿದ್ದಾರೆ. ವರ್ಷದ ಹಿಂದಷ್ಟೇ ಅವರಿಗೆ ಜರ್ಮನಿಯ ಪೌರತ್ವ ಸಿಕ್ಕಿತ್ತು ಎಂದರು.</p>.<p>ಆರಂಭದಲ್ಲಿ ಹ್ಯಾಂಬರ್ಗ್ನಲ್ಲಿ ನೆಲೆಸಿದ್ದ ಅವರು, ಬಳಿಕ ಮ್ಯೂನಿಚ್ ನಗರಕ್ಕೆವರ್ಗಾವಣೆಗೊಂಡಿದ್ದರು. ಅಲ್ಲಿಗೆ ಹೋದ ಮೇಲೆ ಇಂತಹ ದುರ್ಘಟನೆ ಸಂಭವಿಸಿದೆ. ಇಲ್ಲಿ ಮಗನನ್ನು ನೋಡಬೇಕು ಎಂದು 73 ವರ್ಷದ ತಾಯಿ ಗೋಳಾಡುತ್ತಿದ್ದಾರೆ. ಅವರಿಗೆ ಜರ್ಮನಿಗೆ ತೆರಳಲು ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.</p>.<p>ಪ್ರಶಾಂತ್ಗೆ ತಾಯಿ ಬಗ್ಗೆ ಕಾಳಜಿ ಹೆಚ್ಚು. ಆಗಾಗ ಕರೆ ಮಾಡಿ ಆರೋಗ್ಯವಿಚಾರಿಸಿಕೊಳ್ಳುತ್ತಿದ್ದರು. ತಾಯಿಗಾಗಿ 2013ರಲ್ಲಿ ಕುಂದಾಪುರ ತಾಲ್ಲೂಕಿನ ಕುಂದೇಶ್ವರ ದೇವಸ್ಥಾನದ ಬಳಿ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದರು.ತಾಯಿ ಅದೇ ಮನೆಯಲ್ಲಿ ವಾಸ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.</p>.<p>ಪ್ರಶಾಂತ್ ತಾಯಿ ವಿನಯಾ, ತಂದೆ ವೆಂಕಟರಾಮ್. ತಂದೆ ಸಾಗರದಲ್ಲಿ ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಇಬ್ಬರು ಗಂಡುಮಕ್ಕಳ ಪೈಕಿ ಪ್ರಶಾಂತ್ ಕಿರಿಯವರು. ಅಣ್ಣ ಭಾತ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಕ್ಕ ಸಾಧನ ಅಂಬಲಪಾಡಿಯಲ್ಲಿ ವಾಸವಿದ್ದಾರೆ ಎಂದು ಕುಟುಂಬದ ವಿವರ ನೀಡಿದರು.</p>.<p>ಪ್ರಶಾಂತ್ ಕುಟುಂಬ ಸಮೇತ 2 ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದರು. 2017ರ ಚೌತಿಯ ಸಂದರ್ಭ ಊರಿಗೆ ಬಂದಿದ್ದರು. ಮಾರ್ಚ್ 23ರಂದು ಕೊನೆಯ ಬಾರಿ ಕರೆಮಾಡಿ ತಾಯಿಯ ಜತೆಗೆ ಮಾತನಾಡಿದ್ದರು. ಏಪ್ರಿಲ್ನಲ್ಲಿ ಮತ್ತೆ ಬರುವುದಾಗಿ ಹೇಳಿದ್ದರು. ಅಷ್ಟರಲ್ಲಿ ದುರ್ಘಟನೆ ಸಂಭವಿಸಿದೆ ಎಂದು ದುಃಖ ವ್ಯಕ್ತಪಡಿಸಿದರು.</p>.<p>ಮೃತದೇಹವನ್ನು ಸರ್ಕಾರದ ಮೂಲಕ ಊರಿಗೆ ತೆಗೆದುಕೊಂಡು ಬರಲು ಪ್ರಯತ್ನಿಸುತ್ತಿದ್ದೇವೆ ಎಂದು ಶ್ರೀನಿವಾಸ್ ಶೇರಿಗಾರ್ ತಿಳಿಸಿದರು.</p>.<p><strong>‘ಅರ್ಧಕ್ಕೆ ನಿಂತ ಮನೆ’</strong></p>.<p>ಪ್ರಶಾಂತ್ ವರ್ಷದ ಹಿಂದೆಯಷ್ಟೇ ಜರ್ಮನಿ ದೇಶದ ಪೌರತ್ವ ಪಡೆದುಕೊಂಡಿದ್ದರು. ಈ ವಿಚಾರವನ್ನು ಕರೆ ಮಾಡಿ ತಿಳಿಸಿದ್ದರು. ಪೌರತ್ವ ಸಿಕ್ಕಿದ ಹಿನ್ನೆಲೆಯಲ್ಲಿ ಅಲ್ಲಿಯೇ ಸ್ವಂತ ಮನೆ ನಿರ್ಮಿಸಲು ಮುಂದಾಗಿದ್ದು, ಅರ್ಧದಷ್ಟು ನಿರ್ಮಾಣ ಕಾಮಗಾರಿಯೂ ಮುಗಿದಿದೆ ಎಂದು ಅಕ್ಕ ಸಾಧನಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಜರ್ಮನಿಯ ಮ್ಯುನಿಚ್ ನಗರದಲ್ಲಿ ಅಪರಿಚಿತ ವ್ಯಕ್ತಿಯಿಂದ ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಕುಂದಾಪುರ ತಾಲ್ಲೂಕಿನ ಪ್ರಶಾಂತ್ ಅವರ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಪ್ರಶಾಂತ್ ಅವರ ಮೃತದೇಹವನ್ನು ನೋಡಲು ಸರ್ಕಾರ ಆದಷ್ಟುಬೇಗ ವ್ಯವಸ್ಥೆ ಮಾಡಬೇಕು ಎಂದು ಕಂಬನಿ ಮಿಡಿದಿದೆ.</p>.<p>ಈ ಸಂಬಂಧಉಡುಪಿಯಲ್ಲಿರುವ ಪ್ರಶಾಂತ್ ಸಹೋದರಿ ಸಾಧನಾ ಪತಿ ಶ್ರೀನಿವಾಸ ಶೇರಿಗಾರ್ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಪ್ರಶಾಂತ್ ಅವರನ್ನು ಕೊಂದಿದ್ದು ಯಾರು, ಯಾವ ಉದ್ದೇಶಕ್ಕೆ ಹತ್ಯೆ ಮಾಡಲಾಗಿದೆ ಎಂಬ ವಿಚಾರ ಬಹಿರಂಗವಾಗಬೇಕು. ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ಶ್ರೀನಿವಾಸ್ ಶೇರಿಗಾರ್ ಒತ್ತಾಯಿಸಿದರು.</p>.<p>ಪ್ರಶಾಂತ್ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರ್ ಪದವಿ ಪಡೆದಿದ್ದರು. ಬಳಿಕ ಬೆಂಗಳೂರು ಹಾಗೂ ಹೈದರಾಬಾದ್ನ ಖಾಸಗಿ ಕಂಪೆನಿಗಳಲ್ಲಿ ಕೆಲಕಾಲ ಕೆಲಸ ಮಾಡಿದ್ದರು ಎಂದು ಮಾಹಿತಿ ಹಂಚಿಕೊಂಡರು.</p>.<p>ಸತ್ಯಂ ಕಂಪ್ಯೂಟರ್ಸ್ ಕಂಪೆನಿಯ ಮೂಲಕ ಜರ್ಮನಿಯಲ್ಲಿ ಕೆಲಸ ಮಾಡುವ ಅವಕಾಶ ಪ್ರಶಾಂತ್ ಅವರಿಗೆ ದೊರೆಯಿತು. 2013ರಲ್ಲಿ ಪತ್ನಿಯ ಜತೆಗೆ ಜರ್ಮನಿಗೆ ಹೋಗಿದ್ದ ಅವರು 15 ವರ್ಷಗಳಿಂದ ಅಲ್ಲಿಯೇ ನೆಲಸಿದ್ದಾರೆ. ವರ್ಷದ ಹಿಂದಷ್ಟೇ ಅವರಿಗೆ ಜರ್ಮನಿಯ ಪೌರತ್ವ ಸಿಕ್ಕಿತ್ತು ಎಂದರು.</p>.<p>ಆರಂಭದಲ್ಲಿ ಹ್ಯಾಂಬರ್ಗ್ನಲ್ಲಿ ನೆಲೆಸಿದ್ದ ಅವರು, ಬಳಿಕ ಮ್ಯೂನಿಚ್ ನಗರಕ್ಕೆವರ್ಗಾವಣೆಗೊಂಡಿದ್ದರು. ಅಲ್ಲಿಗೆ ಹೋದ ಮೇಲೆ ಇಂತಹ ದುರ್ಘಟನೆ ಸಂಭವಿಸಿದೆ. ಇಲ್ಲಿ ಮಗನನ್ನು ನೋಡಬೇಕು ಎಂದು 73 ವರ್ಷದ ತಾಯಿ ಗೋಳಾಡುತ್ತಿದ್ದಾರೆ. ಅವರಿಗೆ ಜರ್ಮನಿಗೆ ತೆರಳಲು ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.</p>.<p>ಪ್ರಶಾಂತ್ಗೆ ತಾಯಿ ಬಗ್ಗೆ ಕಾಳಜಿ ಹೆಚ್ಚು. ಆಗಾಗ ಕರೆ ಮಾಡಿ ಆರೋಗ್ಯವಿಚಾರಿಸಿಕೊಳ್ಳುತ್ತಿದ್ದರು. ತಾಯಿಗಾಗಿ 2013ರಲ್ಲಿ ಕುಂದಾಪುರ ತಾಲ್ಲೂಕಿನ ಕುಂದೇಶ್ವರ ದೇವಸ್ಥಾನದ ಬಳಿ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದರು.ತಾಯಿ ಅದೇ ಮನೆಯಲ್ಲಿ ವಾಸ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.</p>.<p>ಪ್ರಶಾಂತ್ ತಾಯಿ ವಿನಯಾ, ತಂದೆ ವೆಂಕಟರಾಮ್. ತಂದೆ ಸಾಗರದಲ್ಲಿ ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಇಬ್ಬರು ಗಂಡುಮಕ್ಕಳ ಪೈಕಿ ಪ್ರಶಾಂತ್ ಕಿರಿಯವರು. ಅಣ್ಣ ಭಾತ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಕ್ಕ ಸಾಧನ ಅಂಬಲಪಾಡಿಯಲ್ಲಿ ವಾಸವಿದ್ದಾರೆ ಎಂದು ಕುಟುಂಬದ ವಿವರ ನೀಡಿದರು.</p>.<p>ಪ್ರಶಾಂತ್ ಕುಟುಂಬ ಸಮೇತ 2 ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದರು. 2017ರ ಚೌತಿಯ ಸಂದರ್ಭ ಊರಿಗೆ ಬಂದಿದ್ದರು. ಮಾರ್ಚ್ 23ರಂದು ಕೊನೆಯ ಬಾರಿ ಕರೆಮಾಡಿ ತಾಯಿಯ ಜತೆಗೆ ಮಾತನಾಡಿದ್ದರು. ಏಪ್ರಿಲ್ನಲ್ಲಿ ಮತ್ತೆ ಬರುವುದಾಗಿ ಹೇಳಿದ್ದರು. ಅಷ್ಟರಲ್ಲಿ ದುರ್ಘಟನೆ ಸಂಭವಿಸಿದೆ ಎಂದು ದುಃಖ ವ್ಯಕ್ತಪಡಿಸಿದರು.</p>.<p>ಮೃತದೇಹವನ್ನು ಸರ್ಕಾರದ ಮೂಲಕ ಊರಿಗೆ ತೆಗೆದುಕೊಂಡು ಬರಲು ಪ್ರಯತ್ನಿಸುತ್ತಿದ್ದೇವೆ ಎಂದು ಶ್ರೀನಿವಾಸ್ ಶೇರಿಗಾರ್ ತಿಳಿಸಿದರು.</p>.<p><strong>‘ಅರ್ಧಕ್ಕೆ ನಿಂತ ಮನೆ’</strong></p>.<p>ಪ್ರಶಾಂತ್ ವರ್ಷದ ಹಿಂದೆಯಷ್ಟೇ ಜರ್ಮನಿ ದೇಶದ ಪೌರತ್ವ ಪಡೆದುಕೊಂಡಿದ್ದರು. ಈ ವಿಚಾರವನ್ನು ಕರೆ ಮಾಡಿ ತಿಳಿಸಿದ್ದರು. ಪೌರತ್ವ ಸಿಕ್ಕಿದ ಹಿನ್ನೆಲೆಯಲ್ಲಿ ಅಲ್ಲಿಯೇ ಸ್ವಂತ ಮನೆ ನಿರ್ಮಿಸಲು ಮುಂದಾಗಿದ್ದು, ಅರ್ಧದಷ್ಟು ನಿರ್ಮಾಣ ಕಾಮಗಾರಿಯೂ ಮುಗಿದಿದೆ ಎಂದು ಅಕ್ಕ ಸಾಧನಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>