ಊರಿನ ಮನೆಮಂದಿಗೂ ಒಂದಿಲ್ಲೊಂದು ಭಾದೆಗಳು ಕಾಡುತ್ತಿದ್ದ ಕಾರಣ, ಆರೂಢ ಪ್ರಶ್ನೆಯ ಮೂಲಕ ತಿಳಿದು ಎಲ್ಲರ ಸಹಕಾರದೊಂದಿಗೆ ಕಮಲಮ್ಮನವರ ಮೊಮ್ಮಗ ಬೈಕಾಡಿ ಮಂಜುನಾಥ ರಾವ್ ಅವರು ಗುಡಿ ನಿರ್ಮಿಸಿ ಜೀರ್ಣೋದ್ಧಾರ ಮಾಡಿಸುತ್ತಿದ್ದಾರೆ. ಅರ್ಚಕರಾದ ತನಿಯ ಮತ್ತು ಗೌರಿ, ರಾಮಚಂದ್ರ ಕುಲಾಲ್ ಅಧ್ಯಕ್ಷರಾಗಿ, ಶಂಕರ ನಾಯ್ಕ್ ಕಾರ್ಯದರ್ಶಿಯಾಗಿ, ಸ್ವಾಗತ ಸಮಿತಿಯ ಜೊತೆಗೆ ವಿವಿಧ ಉಪ ಸಮಿತಿಗಳು, ಸ್ಥಳೀಯ ಯುವ ಮಿತ್ರರು ಜೀರ್ಣೋದ್ಧಾರ ಕಾರ್ಯದ ಯಶಸ್ಸಿಗೆ ದುಡಿಯುತ್ತಿದ್ದಾರೆ.