<p>ಉಡುಪಿ: ‘ಬಿಜೆಪಿ ಗೋಲ್ವಾಲ್ಕರ್, ಗೋಡ್ಸೆ, ಸಾವರ್ಕರ್ ಸಿದ್ಧಾಂತಗಳಿಂದ ದೇಶ ಒಡೆಯಲು ಯತ್ನಿಸಿದರೆ, ನಾವೆಲ್ಲರೂ ಅಂಬೇಡ್ಕರ್ ಸಂವಿಧಾನದ ಬುನಾದಿಯ ಮೇಲೆ ದೇಶವನ್ನು ಕಟ್ಟೋಣ’ ಎಂದು ಪ್ರಗತಿಪರ ಚಿಂತಕ ಯಾಸಿನ್ ಮಲ್ಪೆ ಕರೆ ನೀಡಿದರು.</p>.<p>ಶುಕ್ರವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರೋಧಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದರು.</p>.<p>ಸಿಎಎ, ಎನ್ಆರ್ಸಿ ಮುಸ್ಲಿಮರ ವಿರೋಧಿ ಮಾತ್ರವಲ್ಲ; ದಲಿತರ, ಆದಿವಾಸಿಗಳ, ಬಡವರ ವಿರೋಧಿ. ದಶಕಗಳಿಂದ ಬದುಕು ಕಟ್ಟಿಕೊಂಡವರನ್ನು ನಿರ್ವಸತಿಗರನ್ನಾಗಿ ಮಾಡುವ ಷಡ್ಯಂತ್ರ ಎಂದು ವಾಗ್ದಾಳಿ ನಡೆಸಿದರು.</p>.<p>ಚಿಂತಕ ಜಿ.ರಾಜಶೇಖರ್ ಮಾತನಾಡಿ, ‘ಅಂಬೇಡ್ಕರ್ ಸ್ಮರಣೆ ಎಂದರೆ ಸಂವಿಧಾನದ ಆಶಯಗಳನ್ನು ಪಾಲಿಸುವುದು ಎಂದರ್ಥ. ಇದಕ್ಕೆ ವಿರುದ್ಧವಾಗಿ ಸಿಎಎ, ಎನ್ಆರ್ಸಿ, ಎನ್ಪಿಆರ್ ಜಾರಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಪೌರತ್ವ ನೋಂದಣಿ ಕಾಯ್ದೆ ಸಂವಿಧಾನದ ಮೂಲ ಆಶಯಗಳಿಗೆ ದ್ರೋಹ ಬಗೆಯುತ್ತಿದೆ. ಮುಸ್ಲಿಮೇತರರಿಗೆ ಮಾತ್ರ ಕಾಯ್ದೆಯಡಿ ಪೌರತ್ವ ನೀಡಿದರೆ, ಶ್ರೀಲಂಕಾ ಯುದ್ಧ ದೌರ್ಜನ್ಯಕ್ಕೆ ಸಿಲುಕಿ ಭಾರತಕ್ಕೆ ವಲಸೆ ಬಂದ ಮುಸ್ಲಿಮರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.</p>.<p>ಮುಖಂಡ ಅಮೃತ್ ಶೆಣೈ ಮಾತನಾಡಿ, ಯುವಜನರ ಮನಸ್ಸಿನಿಂದ ಅಂಬೇಡ್ಕರ್, ಗಾಂಧಿ, ನೆಹರೂ ಅವರಂಥ ಮಹನೀಯರನ್ನು ಮರೆಯಾಗಿಸಿ, ಗೋಡ್ಸೆ, ಸಾವರ್ಕರ್ ಅವರಂಥ ಹೇಡಿಗಳ ಪ್ರತಿಮೆಗಳನ್ನು ಬಿಜೆಪಿ ಪ್ರತಿಷ್ಠಾಪಿಸುತ್ತಿದೆ ಎಂದು ಟೀಕಿಸಿದರು.</p>.<p>ಸಿಎಎ ಮುಸ್ಲಿಮರ ವಿರೋಧಿ ಮಾತ್ರವಲ್ಲ, ಬಡವರ ಹಾಗೂ ದಶಕಗಳಿಂದ ದೇಶದಲ್ಲಿದ್ದರೂ ದಾಖಲೆಗಳಿಲ್ಲದವರ ವಿರೋಧಿಯಾಗಿದೆ. ದೇಶವನ್ನು ಪ್ರೀತಿಸುವವರು, ಅಂಬೇಡ್ಕರ್ ಅವರನ್ನು ಗೌರವಿಸುವವರು ಇದೇ 30ರಂದು ನಡೆಯುವ ಸಿಎಎ ವಿರೋಧಿ ಸಮಾವೇಶಕ್ಕೆ ಬೆಂಬಲ ನೀಡಬೇಕು ಎಂದರು.</p>.<p>ಪತ್ರಕರ್ತ ಶಶಿಧರ್ ಹೆಮ್ಮಾಡಿ ಮಾತನಾಡಿ, ‘ರೈಲು ನಿಲ್ದಾಣವೇ ಇಲ್ಲದ ಕಡೆ ಚಹಾ ಮಾರಿದವರು, ಸಹಪಾಠಿಗಳೇ ಇಲ್ಲದ ಕಾಲೇಜಿನಿಂದ ಪದವಿ ಪಡೆದ ಪ್ರಧಾನಿ ದೇಶದ ಜನರ ಬಳಿ ಪೌರತ್ವ ಸಾಬೀತು ಪಡಿಸುವಂತೆ ದಾಖಲೆಗಳನ್ನು ಕೇಳುತ್ತಿರುವುದು ಹಾಸ್ಯಾಸ್ಪದ’ ಎಂದು ವ್ಯಂಗ್ಯವಾಡಿದರು.</p>.<p>ಚುನಾವಣೆಯಲ್ಲಿ ಮತದಾರರ ಗುರುತಿನ ಪತ್ರ ತೋರಿಸಿ ಮತದಾರರು ಮತ ಹಾಕಿ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಪೌರತ್ವ ಸಾಬೀತಿಗೆ ವೋಟರ್ ಐಡಿ ಅಧಿಕೃತವಲ್ಲ ಎಂದಾದರೆ, ಅಧಿಕಾರ ತ್ಯಜಿಸಿ ಎಂದು ಸವಾಲು ಹಾಕಿದರು.</p>.<p>ದೇಶ ಸಂಕಷ್ಟದ ಕಾಲಘಟ್ಟದಲ್ಲಿದೆ. ಭಾರತೀಯರಿಗೆ ಪೌರತ್ವವನ್ನು ಸಾಬೀತು ಮಾಡಬೇಕಾದ ದುಸ್ಥಿತಿ ಬಂದಿದೆ. ಪ್ರತಿ ಮನೆಮನೆಗೂ ತೆರಳಿ ಸಿಎಎ, ಎನ್ಆರ್ಸಿಯಿಂದ ಆಗುವ ತೊಂದರೆಗಳನ್ನು ಜನರಿಗೆ ತಿಳಿಸಬೇಕಿದೆ ಎಂದರು.</p>.<p>ಮುಖಂಡರಾದ ರಮೇಶ್ ಕಾಂಚನ್, ಫಾದರ್ ವಿಲಿಯಂ ಮಾರ್ಟಿಸ್ ಸೇರಿದಂತೆ ಹಲವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಡುಪಿ: ‘ಬಿಜೆಪಿ ಗೋಲ್ವಾಲ್ಕರ್, ಗೋಡ್ಸೆ, ಸಾವರ್ಕರ್ ಸಿದ್ಧಾಂತಗಳಿಂದ ದೇಶ ಒಡೆಯಲು ಯತ್ನಿಸಿದರೆ, ನಾವೆಲ್ಲರೂ ಅಂಬೇಡ್ಕರ್ ಸಂವಿಧಾನದ ಬುನಾದಿಯ ಮೇಲೆ ದೇಶವನ್ನು ಕಟ್ಟೋಣ’ ಎಂದು ಪ್ರಗತಿಪರ ಚಿಂತಕ ಯಾಸಿನ್ ಮಲ್ಪೆ ಕರೆ ನೀಡಿದರು.</p>.<p>ಶುಕ್ರವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರೋಧಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದರು.</p>.<p>ಸಿಎಎ, ಎನ್ಆರ್ಸಿ ಮುಸ್ಲಿಮರ ವಿರೋಧಿ ಮಾತ್ರವಲ್ಲ; ದಲಿತರ, ಆದಿವಾಸಿಗಳ, ಬಡವರ ವಿರೋಧಿ. ದಶಕಗಳಿಂದ ಬದುಕು ಕಟ್ಟಿಕೊಂಡವರನ್ನು ನಿರ್ವಸತಿಗರನ್ನಾಗಿ ಮಾಡುವ ಷಡ್ಯಂತ್ರ ಎಂದು ವಾಗ್ದಾಳಿ ನಡೆಸಿದರು.</p>.<p>ಚಿಂತಕ ಜಿ.ರಾಜಶೇಖರ್ ಮಾತನಾಡಿ, ‘ಅಂಬೇಡ್ಕರ್ ಸ್ಮರಣೆ ಎಂದರೆ ಸಂವಿಧಾನದ ಆಶಯಗಳನ್ನು ಪಾಲಿಸುವುದು ಎಂದರ್ಥ. ಇದಕ್ಕೆ ವಿರುದ್ಧವಾಗಿ ಸಿಎಎ, ಎನ್ಆರ್ಸಿ, ಎನ್ಪಿಆರ್ ಜಾರಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಪೌರತ್ವ ನೋಂದಣಿ ಕಾಯ್ದೆ ಸಂವಿಧಾನದ ಮೂಲ ಆಶಯಗಳಿಗೆ ದ್ರೋಹ ಬಗೆಯುತ್ತಿದೆ. ಮುಸ್ಲಿಮೇತರರಿಗೆ ಮಾತ್ರ ಕಾಯ್ದೆಯಡಿ ಪೌರತ್ವ ನೀಡಿದರೆ, ಶ್ರೀಲಂಕಾ ಯುದ್ಧ ದೌರ್ಜನ್ಯಕ್ಕೆ ಸಿಲುಕಿ ಭಾರತಕ್ಕೆ ವಲಸೆ ಬಂದ ಮುಸ್ಲಿಮರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.</p>.<p>ಮುಖಂಡ ಅಮೃತ್ ಶೆಣೈ ಮಾತನಾಡಿ, ಯುವಜನರ ಮನಸ್ಸಿನಿಂದ ಅಂಬೇಡ್ಕರ್, ಗಾಂಧಿ, ನೆಹರೂ ಅವರಂಥ ಮಹನೀಯರನ್ನು ಮರೆಯಾಗಿಸಿ, ಗೋಡ್ಸೆ, ಸಾವರ್ಕರ್ ಅವರಂಥ ಹೇಡಿಗಳ ಪ್ರತಿಮೆಗಳನ್ನು ಬಿಜೆಪಿ ಪ್ರತಿಷ್ಠಾಪಿಸುತ್ತಿದೆ ಎಂದು ಟೀಕಿಸಿದರು.</p>.<p>ಸಿಎಎ ಮುಸ್ಲಿಮರ ವಿರೋಧಿ ಮಾತ್ರವಲ್ಲ, ಬಡವರ ಹಾಗೂ ದಶಕಗಳಿಂದ ದೇಶದಲ್ಲಿದ್ದರೂ ದಾಖಲೆಗಳಿಲ್ಲದವರ ವಿರೋಧಿಯಾಗಿದೆ. ದೇಶವನ್ನು ಪ್ರೀತಿಸುವವರು, ಅಂಬೇಡ್ಕರ್ ಅವರನ್ನು ಗೌರವಿಸುವವರು ಇದೇ 30ರಂದು ನಡೆಯುವ ಸಿಎಎ ವಿರೋಧಿ ಸಮಾವೇಶಕ್ಕೆ ಬೆಂಬಲ ನೀಡಬೇಕು ಎಂದರು.</p>.<p>ಪತ್ರಕರ್ತ ಶಶಿಧರ್ ಹೆಮ್ಮಾಡಿ ಮಾತನಾಡಿ, ‘ರೈಲು ನಿಲ್ದಾಣವೇ ಇಲ್ಲದ ಕಡೆ ಚಹಾ ಮಾರಿದವರು, ಸಹಪಾಠಿಗಳೇ ಇಲ್ಲದ ಕಾಲೇಜಿನಿಂದ ಪದವಿ ಪಡೆದ ಪ್ರಧಾನಿ ದೇಶದ ಜನರ ಬಳಿ ಪೌರತ್ವ ಸಾಬೀತು ಪಡಿಸುವಂತೆ ದಾಖಲೆಗಳನ್ನು ಕೇಳುತ್ತಿರುವುದು ಹಾಸ್ಯಾಸ್ಪದ’ ಎಂದು ವ್ಯಂಗ್ಯವಾಡಿದರು.</p>.<p>ಚುನಾವಣೆಯಲ್ಲಿ ಮತದಾರರ ಗುರುತಿನ ಪತ್ರ ತೋರಿಸಿ ಮತದಾರರು ಮತ ಹಾಕಿ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಪೌರತ್ವ ಸಾಬೀತಿಗೆ ವೋಟರ್ ಐಡಿ ಅಧಿಕೃತವಲ್ಲ ಎಂದಾದರೆ, ಅಧಿಕಾರ ತ್ಯಜಿಸಿ ಎಂದು ಸವಾಲು ಹಾಕಿದರು.</p>.<p>ದೇಶ ಸಂಕಷ್ಟದ ಕಾಲಘಟ್ಟದಲ್ಲಿದೆ. ಭಾರತೀಯರಿಗೆ ಪೌರತ್ವವನ್ನು ಸಾಬೀತು ಮಾಡಬೇಕಾದ ದುಸ್ಥಿತಿ ಬಂದಿದೆ. ಪ್ರತಿ ಮನೆಮನೆಗೂ ತೆರಳಿ ಸಿಎಎ, ಎನ್ಆರ್ಸಿಯಿಂದ ಆಗುವ ತೊಂದರೆಗಳನ್ನು ಜನರಿಗೆ ತಿಳಿಸಬೇಕಿದೆ ಎಂದರು.</p>.<p>ಮುಖಂಡರಾದ ರಮೇಶ್ ಕಾಂಚನ್, ಫಾದರ್ ವಿಲಿಯಂ ಮಾರ್ಟಿಸ್ ಸೇರಿದಂತೆ ಹಲವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>