ಈ ಬಾರಿ ಒಂದೇ ಬಾರಿ ಹೊರೆ ಕಾಣಿಕೆಯನ್ನು ಸ್ವೀಕರಿಸುವ ಬದಲು ಪ್ರತಿ 15ದಿನಗಳಿಗೊಮ್ಮೆ ಹೊರೆಕಾಣಿಕೆ ಸ್ವೀಕರಿಸಲು ನಿರ್ಧರಿಸಲಾಗಿದೆ. ಇದರಿಂದ ಆಹಾರ ಪದಾರ್ಥಗಳು ಹಾಳಾಗುವುದಿಲ್ಲ. ಭಕ್ತರ ಅನ್ನಪ್ರಸಾದಕ್ಕೆ ವಿನಿಯೋಗವಾಗಲಿದೆ. ಹೊರೆಕಾಣಿಕೆ ಸಲ್ಲಿಸುವ ಭಕ್ತರು, ಸಂಘ ಸಂಸ್ಥೆಗಳು, ದೇವಸ್ಥಾನ, ಮಠಗಳು ಮೊದಲೇ ಹೊರೆಕಾಣಿಕೆ ಸಲ್ಲಿಕೆ ದಿನಾಂಕವನ್ನು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.