ಉಡುಪಿ: ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ರಜೆ ಘೋಷಣೆ ಮಾಡುವ ಆದೇಶದ ಪ್ರತಿ ನಕಲು ತಡೆಗೆ ಜಿಲ್ಲಾಡಳಿತ ಕ್ಯೂರ್ ಕೋಡ್ ತಂತ್ರಜ್ಞಾನದ ಮೊರೆ ಹೋಗಿದೆ.
ಸಾರ್ವಜನಿಕರು ರಜೆ ಘೋಷಣೆಯಲ್ಲಿರುವ ಆದೇಶ ಪ್ರತಿಯ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮೂಲ ಪ್ರತಿ ಕಾಣಲಿದೆ. ಆದೇಶ ತಿರುಚದಂತೆ ಹಾಗೂ ನಕಲಿ ಮಾಡಲು ಸಾದ್ಯವಾಗದಂತೆ ಕ್ಯೂ ಆರ್ ಕೋಡ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.