ಉಡುಪಿ: ಮುಂದುವರಿದ ಗಾಳಿ ಮಳೆ
ಉಡುಪಿ: ಜಿಲ್ಲೆಯಲ್ಲಿ ಶನಿವಾರವೂ ಬಿರುಗಾಳಿ ಸಹಿತ ಮಳೆ ಸುರಿಯಿತು. ಬ್ರಹ್ಮಾವರ ತಾಲ್ಲೂಕಿನ ಕರ್ಕಡ, ಹಾವಂಜೆ, ಇನ್ನಾ, ಬೈಂದೂರು ತಾಲ್ಲೂಕಿನ ನಾವುಂದ, ಕಾಲ್ತೋಡು, ಬಿಜೂರು, ಉಡುಪಿ ತಾಲ್ಲೂಕಿನ ತೆಂಕನಿಡಿಯೂರು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.
ನಿರಂತರ ಸುರಿಯುತ್ತಿರುವ ಮಳೆಗೆ ಉಡುಪಿಯ ಮಠದಬೆಟ್ಟು ಕಾಲು ಸೇತುವೆ ಕುಸಿದೆ. ಪರ್ಕಳದಲ್ಲಿ ಬಿರುಗಾಳಿಗೆ ಹಲವು ಮನೆಗಳ ಹೆಂಚು, ತಗಡಿನ ಶೀಟ್ಗಳು ಹಾರಿಹೋಗಿವೆ. ಜಿಲ್ಲೆಯಲ್ಲಿ 3 ಸೆಂ.ಮೀ ಮಳೆ ಬಿದ್ದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.