ರೆಡ್ಕ್ರಾಸ್, ಲಯನ್ಸ್ ಫೌಂಡೇಷನ್ ಮೂಲಕ ದೇಶ ಹಾಗೂ ವಿದೇಶಗಳಲ್ಲೂ ಸೇವೆ ಸಲ್ಲಿಸಿರುವ ಇವರು, ಡಬ್ಲ್ಯೂಎಚ್ ಓ, ಕಾಮನ್ ವೆಲ್ತ್ ಫೌಂಡೇಷನ್ ಮುಂತಾದ ಅಂತರರಾಷ್ಟ್ರೀಯ ಒಕ್ಕೂಟಗಳ ಸಲಹೆಗಾರರಾಗಿದ್ದಾರೆ. ಕುಂದಾಪುರದ ಮಾಜಿ ಶಾಸಕ ಕಾಪು ಸಂಜೀವ ಶೆಟ್ಟಿ ಅವರ ಪುತ್ರ. ಕುಂದಾಪುರದ ಪ್ರಸಿದ್ಧ ವೈದ್ಯರಾಗಿದ್ದ ಡಾ.ವೈ.ಸೀತಾರಾಂ ಶೆಟ್ಟಿ ಅವರ ಅಳಿಯ. ಇವರು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಟಲ್, ಲಾನ್ ಟೆನಿಸ್ ಆಟಗಾರರಾಗಿದ್ದರು.