<p><strong>ಉಡುಪಿ</strong>: ಆಧುನಿಕತೆ ಹಾಗೂ ಪರಂಪರೆ ಪ್ರತ್ಯೇಕಗೊಂಡಿರುವುದೇ ಸಮಸ್ಯೆಗಳ ಮೂಲ. ಎರಡರ ಒಳಿತುಗಳನ್ನು ತೆಗೆದುಕೊಂಡು ಮಧ್ಯಮ ಮಾರ್ಗಕ್ಕೆ ಬರುವುದಾದರೆ ದೇಶದ ಸಮಸ್ಯೆ ಪರಿಹಾರ ಮಾಡಬಹುದು. ಸ್ವಾತಂತ್ರ್ಯದ ಅಮೃತ ವರ್ಷವನ್ನು ಅಮೃತ ಸಿಂಚನವಾಗಲಿದೆ ಎಂದು ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.</p>.<p>ನಗರದ ಎಂಜಿಎಂ ಕಾಲೇಜಿನಲ್ಲಿ ಸೋಮವಾರ ಪವಿತ್ರ ವಸ್ತ್ರ ಅಭಿಯಾನದ ಭಾಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಂಪರೆ ಹಾಗೂ ಆಧುನಿಕತೆಯ ಗುಣಗಳನ್ನು ಮೇಳೈಸಿಕೊಂಡು ದೇಶವನ್ನು ಕಟ್ಟಬೇಕಾದ ಅಗತ್ಯತೆ ಇದೆ ಎಂದರು.</p>.<p>ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಪ್ರಸ್ತುತ ಪರಂಪರೆ ಹಾಗೂ ಆಧುನಿಕತೆಯನ್ನು ಪ್ರತ್ಯೇಕಿಸಿ ನೋಡುತ್ತಿವೆ. ದೇಶದ ಆರ್ಥಿಕತೆಯನ್ನು ಯಂತ್ರಗಳನ್ನು ಬಳಸಿಯೇ ಕಟ್ಟುವುದಾಗಿ ಬಯಸುತ್ತಿವೆ. ಇದರಿಂದ ನೆಲದ ಜಾನಪದ, ಕೈಉತ್ಪನ್ನಗಳು ಹಾಗೂ ಭಾಷೆ ಉಳಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಇಂಗ್ಲೀಷ್ ಭಾಷೆಯನ್ನು ಆರ್ಥಿಕ ಭಾಷೆಯನ್ನಾಗಿ ಮಾಡಿಕೊಂಡು, ನೆಲದ ಕನ್ನಡ ಹಾಗೂ ತುಳು ಭಾಷೆಯನ್ನು ಸಾಂಸ್ಕತಿಕ ಭಾಷೆ ಹಾಗೂ ಹೃದಯದ ಭಾಷೆಯನ್ನಾಗಿ ಮಾಡಿಕೊಂಡಿದ್ದೇವೆ. ಈ ಮೂಲಕ ನಾವೇ ಭಾಷೆಗಳನ್ನು ಒಡೆದು ಹಾಕಿದ್ದೇವೆ. ಯಾವುದು ಪರಂಪರೆ ಹಾಗೂ ಆಧುನಿಕತೆಯನ್ನು ಒಟ್ಟಿಗೆ ತರುವುದೇ ಮಧ್ಯಮ ಮಾರ್ಗವಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಮಧ್ಯಮ ಮಾರ್ಗವನ್ನು ಹುಡುಕಬೇಕಾಗಿದೆ ಎಂದರು.</p>.<p>ಯುವ ಜನಾಂಗವನ್ನು ಆಕರ್ಷಿಸುವುದು ಪವಿತ್ರ ವಸ್ತ್ರ ಅಭಿಯಾನ ಚಳವಳಿಯ ಪ್ರಮುಖ ಉದ್ದೇಶ. ಅಭಿಯಾನಗಳ ಹಿಂದಿರುವ ಉದ್ದೇಶ ಹಾಗೂ ಸತ್ಯ ಅರಿಯುವಲ್ಲಿ ಯುವ ಜನಾಂಗ ಮುಂದಿದ್ದು, ವೃದ್ಧರು ವಿಫಲರಾಗುತ್ತಿದ್ದಾರೆ. ಪರಂಪರೆ ಹಾಗೂ ಆಧುನಿಕತೆ ಹೆಸರಿನಲ್ಲಿ ಮಕ್ಕಳನ್ನು ಪ್ರತ್ಯೇಕಿಸುತ್ತಿದ್ದಾರೆ ಎಂದು ಪ್ರಸನ್ನ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಯುವಕ ಯುವತಿಯರು ಮೊಬೈಲ್ ದಾಸರಾಗಿದ್ದರೂ ಧೈರ್ಯವಾಗಿ ಮುನ್ನುಗ್ಗುತ್ತಿದ್ದಾರೆ. ಹಾಗಾಗಿ, ಪವಿತ್ರ ವಸ್ತ್ರ ಅಭಿಯಾನವನ್ನು ಯುವಕರಿಗೆ ತಲುಪಿಸುವ ನಿಟ್ಟಿನಲ್ಲಿ ಫ್ಯಾಷನ್ ಚಳವಳಿಯಾಗಿ ಮಾಡಲು ನಿರ್ಧರಿಸಿದ್ದೇವೆ. ಸಿಂಥೆಟಿಕ್ ಬಟ್ಟೆ ಧರಿಸುವ ಬದಲು, ಯುವಜನಾಂಗ ಖಾದಿ ಬಟ್ಟೆಯನ್ನು ಧರಿಸಿ ಫ್ಯಾಷನ್ ಮಾಡಬೇಕು ಎಂದು ಕರೆ ನೀಡಿದರು.</p>.<p>ಮಹಾತ್ಮಾ ಗಾಂಧೀಜಿ ಫ್ಯಾಷನ್ ತಪ್ಪು ಎಂದು ಹೇಳಿಲ್ಲ. ಖಾದಿ ವಸ್ತ್ರವನ್ನೇ ಫ್ಯಾಷನ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ನೈಸರ್ಗಿಕ ಬಣ್ಣದಿಂದ ತಯಾರಾದ ಖಾದಿ ಬಟ್ಟೆ ಆಯುರ್ವೇದ ಉತ್ಪನ್ನಗಳ ಗುಣಗಳನ್ನು ಹೊಂದಿದ್ದು, ಇದರ ಬಳಕೆ ಹೆಚ್ಚಾಗಬೇಕಿದೆ ಎಂದರು.</p>.<p>ವಿದ್ಯಾರ್ಥಿನಿ ಸಮನ್ವಿ ಗಾಂಧೀಜಿ ಅವರ ಕುರಿತಾದ ಗೀತೆ ಹಾಡಿದರು. ಬಳಿಕ ವಿದ್ಯಾರ್ಥಿಗಳ ಜತೆ ಸಂವಾದ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಆಧುನಿಕತೆ ಹಾಗೂ ಪರಂಪರೆ ಪ್ರತ್ಯೇಕಗೊಂಡಿರುವುದೇ ಸಮಸ್ಯೆಗಳ ಮೂಲ. ಎರಡರ ಒಳಿತುಗಳನ್ನು ತೆಗೆದುಕೊಂಡು ಮಧ್ಯಮ ಮಾರ್ಗಕ್ಕೆ ಬರುವುದಾದರೆ ದೇಶದ ಸಮಸ್ಯೆ ಪರಿಹಾರ ಮಾಡಬಹುದು. ಸ್ವಾತಂತ್ರ್ಯದ ಅಮೃತ ವರ್ಷವನ್ನು ಅಮೃತ ಸಿಂಚನವಾಗಲಿದೆ ಎಂದು ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.</p>.<p>ನಗರದ ಎಂಜಿಎಂ ಕಾಲೇಜಿನಲ್ಲಿ ಸೋಮವಾರ ಪವಿತ್ರ ವಸ್ತ್ರ ಅಭಿಯಾನದ ಭಾಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಂಪರೆ ಹಾಗೂ ಆಧುನಿಕತೆಯ ಗುಣಗಳನ್ನು ಮೇಳೈಸಿಕೊಂಡು ದೇಶವನ್ನು ಕಟ್ಟಬೇಕಾದ ಅಗತ್ಯತೆ ಇದೆ ಎಂದರು.</p>.<p>ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಪ್ರಸ್ತುತ ಪರಂಪರೆ ಹಾಗೂ ಆಧುನಿಕತೆಯನ್ನು ಪ್ರತ್ಯೇಕಿಸಿ ನೋಡುತ್ತಿವೆ. ದೇಶದ ಆರ್ಥಿಕತೆಯನ್ನು ಯಂತ್ರಗಳನ್ನು ಬಳಸಿಯೇ ಕಟ್ಟುವುದಾಗಿ ಬಯಸುತ್ತಿವೆ. ಇದರಿಂದ ನೆಲದ ಜಾನಪದ, ಕೈಉತ್ಪನ್ನಗಳು ಹಾಗೂ ಭಾಷೆ ಉಳಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಇಂಗ್ಲೀಷ್ ಭಾಷೆಯನ್ನು ಆರ್ಥಿಕ ಭಾಷೆಯನ್ನಾಗಿ ಮಾಡಿಕೊಂಡು, ನೆಲದ ಕನ್ನಡ ಹಾಗೂ ತುಳು ಭಾಷೆಯನ್ನು ಸಾಂಸ್ಕತಿಕ ಭಾಷೆ ಹಾಗೂ ಹೃದಯದ ಭಾಷೆಯನ್ನಾಗಿ ಮಾಡಿಕೊಂಡಿದ್ದೇವೆ. ಈ ಮೂಲಕ ನಾವೇ ಭಾಷೆಗಳನ್ನು ಒಡೆದು ಹಾಕಿದ್ದೇವೆ. ಯಾವುದು ಪರಂಪರೆ ಹಾಗೂ ಆಧುನಿಕತೆಯನ್ನು ಒಟ್ಟಿಗೆ ತರುವುದೇ ಮಧ್ಯಮ ಮಾರ್ಗವಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಮಧ್ಯಮ ಮಾರ್ಗವನ್ನು ಹುಡುಕಬೇಕಾಗಿದೆ ಎಂದರು.</p>.<p>ಯುವ ಜನಾಂಗವನ್ನು ಆಕರ್ಷಿಸುವುದು ಪವಿತ್ರ ವಸ್ತ್ರ ಅಭಿಯಾನ ಚಳವಳಿಯ ಪ್ರಮುಖ ಉದ್ದೇಶ. ಅಭಿಯಾನಗಳ ಹಿಂದಿರುವ ಉದ್ದೇಶ ಹಾಗೂ ಸತ್ಯ ಅರಿಯುವಲ್ಲಿ ಯುವ ಜನಾಂಗ ಮುಂದಿದ್ದು, ವೃದ್ಧರು ವಿಫಲರಾಗುತ್ತಿದ್ದಾರೆ. ಪರಂಪರೆ ಹಾಗೂ ಆಧುನಿಕತೆ ಹೆಸರಿನಲ್ಲಿ ಮಕ್ಕಳನ್ನು ಪ್ರತ್ಯೇಕಿಸುತ್ತಿದ್ದಾರೆ ಎಂದು ಪ್ರಸನ್ನ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಯುವಕ ಯುವತಿಯರು ಮೊಬೈಲ್ ದಾಸರಾಗಿದ್ದರೂ ಧೈರ್ಯವಾಗಿ ಮುನ್ನುಗ್ಗುತ್ತಿದ್ದಾರೆ. ಹಾಗಾಗಿ, ಪವಿತ್ರ ವಸ್ತ್ರ ಅಭಿಯಾನವನ್ನು ಯುವಕರಿಗೆ ತಲುಪಿಸುವ ನಿಟ್ಟಿನಲ್ಲಿ ಫ್ಯಾಷನ್ ಚಳವಳಿಯಾಗಿ ಮಾಡಲು ನಿರ್ಧರಿಸಿದ್ದೇವೆ. ಸಿಂಥೆಟಿಕ್ ಬಟ್ಟೆ ಧರಿಸುವ ಬದಲು, ಯುವಜನಾಂಗ ಖಾದಿ ಬಟ್ಟೆಯನ್ನು ಧರಿಸಿ ಫ್ಯಾಷನ್ ಮಾಡಬೇಕು ಎಂದು ಕರೆ ನೀಡಿದರು.</p>.<p>ಮಹಾತ್ಮಾ ಗಾಂಧೀಜಿ ಫ್ಯಾಷನ್ ತಪ್ಪು ಎಂದು ಹೇಳಿಲ್ಲ. ಖಾದಿ ವಸ್ತ್ರವನ್ನೇ ಫ್ಯಾಷನ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ನೈಸರ್ಗಿಕ ಬಣ್ಣದಿಂದ ತಯಾರಾದ ಖಾದಿ ಬಟ್ಟೆ ಆಯುರ್ವೇದ ಉತ್ಪನ್ನಗಳ ಗುಣಗಳನ್ನು ಹೊಂದಿದ್ದು, ಇದರ ಬಳಕೆ ಹೆಚ್ಚಾಗಬೇಕಿದೆ ಎಂದರು.</p>.<p>ವಿದ್ಯಾರ್ಥಿನಿ ಸಮನ್ವಿ ಗಾಂಧೀಜಿ ಅವರ ಕುರಿತಾದ ಗೀತೆ ಹಾಡಿದರು. ಬಳಿಕ ವಿದ್ಯಾರ್ಥಿಗಳ ಜತೆ ಸಂವಾದ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>