ಶೀರೂರು ಮಠದ ಕನಕ ಮಾಲ್ನ ಆಸ್ತಿ ವಿವಾದ ಕೂಡ ಬಗೆಹರಿಯುವ ಹಂತಕ್ಕೆ ಬಂದಿದ್ದು, ಮುಂಬೈನ ಉದ್ಯಮಿಯೊಬ್ಬರು ಮಠದ ಜಂಟಿ ಸಹಯೋಗದಲ್ಲಿ ಮಾಲ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ. ನೆಲಮಹಡಿ ಹಾಗೂ 8 ಮಹಡಿಗಳ ಪೈಕಿ ಮೇಲಿನ ನಾಲ್ಕು ಮಹಡಿಗಳನ್ನು ಮಠಕ್ಕೆ ಬಿಟ್ಟುಕೊಡಲಿದ್ದಾರೆ. ಜತೆಗೆ, ಮಾಲ್ ನಿರ್ಮಾಣಕ್ಕೆ ಶೀರೂರು ಮಠ ಬ್ಯಾಂಕ್ನಲ್ಲಿ ಮಾಡಿದ್ದ ಸಾಲವನ್ನು ಏಕಗಂಟಿನಲ್ಲಿ (₹ 10.75 ಕೋಟಿ) ತೀರಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.