ಕೋಟ (ಬ್ರಹ್ಮಾವರ): ಕೋಟ ವಿವೇಕ ವಿದ್ಯಾಸಂಸ್ಥೆಗಳ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡಾಕೂಟವು ವಿವೇಕದ ಕ್ರೀಡಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿಗಳ ಪಥ ಸಂಚಲನದೊಂದಿಗೆ ಆರಂಭವಾದ ಕ್ರೀಡಾಕೂಟದ ಧ್ವಜಾರೋಹಣವನ್ನು ನಿವೃತ್ತ ಪ್ರಾಂಶುಪಾಲ ಎಸ್.ನಾಗೇಶ್ ಶ್ಯಾನುಭಾಗ್ ನೆರವೇರಿಸಿದರು. ಕೋಟ ವಿದ್ಯಾಸಂಘದ ಜತೆ ಕಾರ್ಯದರ್ಶಿ ಪಿ.ಮಂಜುನಾಥ ಉಪಾಧ್ಯ ಕ್ರೀಡಾಜ್ಯೋತಿ ಬೆಳಗಿಸಿದರು.
ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ, ಉದ್ಯಮಿ ಸುಬ್ರಾಯ ಆಚಾರ್, ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಜಗದೀಶ ಹೊಳ್ಳ, ಮುಖ್ಯಶಿಕ್ಷಕ ಭಾಸ್ಕರ ಆಚಾರ್ಯ, ಸಹಶಿಕ್ಷಕ ವೆಂಕಟೇಶ ಉಡುಪ ಇದ್ದರು. ನಂತರ ವಿವಿಧ ಹಂತದ ಓಟದ ಸ್ಪರ್ಧೆ ಮತ್ತು ಜಿಗಿತ, ನೆಗೆತ, ಚಕ್ರಎಸೆತ, ಗುಂಡು ಎಸೆತ ಸ್ಪರ್ಧೆಗಳು ನಡೆಯಿತು.