ಉಡುಪಿಯಿಂದ ಸಿದ್ದಾಪುರಕ್ಕೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿ ಜಿಲ್ಲಾಡಳಿತ ವಿರುದ್ಧ ಆಕ್ರೋಶ ಹೊರಹಾಕಿದ್ದು, ‘ದೂರದ ಹಳ್ಳಿಯಿಂದ ಕಾಲೇಜಿಗೆ ಬಂದಿದ್ದು, ಊರಿಗೆ ತೆರಳಲು ಸರಿಯಾದ ಬಸ್ಗಳ ವ್ಯವಸ್ಥೆ ಇಲ್ಲ. ಅರ್ಧತಾಸಿಗೆ ಒಂದು ಬಸ್ ಬಂದರೂ, ಪ್ರಯಾಣಿಕರು ಹೆಚ್ಚಾಗಿರುವುದರಿಂದ ಸೀಟು ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹುಡುಗಿರಿಯರು ಎಷ್ಟು ಹೊತ್ತು ನಿಲ್ದಾಣದಲ್ಲಿ ಕಾಯಬೇಕು ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ.