<p><strong>ಕುಂದಾಪುರ</strong>: ಆಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಮತ್ತು ಬಾಲಕರ ತಂಡಗಳು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಥ್ರೋಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಚಾಂಪಿಯನ್ ಪಟ್ಟ ಮತ್ತು ರನ್ನರ್ ಅಪ್ ಸ್ಥಾನವನ್ನು ಗಳಿಸಿಕೊಂಡಿವೆ. ಸಾಧನೆ ಮಾಡಿದ ಎರಡೂ ತಂಡಗಳು ವಿಭಾಗ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿವೆ.</p>.<p>ಬಾಲಕಿಯರ ತಂಡದಲ್ಲಿ ಅನನ್ಯ (ನಾಯಕಿ) ಸಾಕ್ಷಿ, ಮಾನಸ, ಭಾಗ್ಯಶ್ರೀ, ಲೇಖನ, ಮಲ್ಲಿಕಾ, ಅಂಕಿತಾ, ಶಿಲ್ಪಾ, ಸಿಂಚನಾ ಶೆಟ್ಟಿ, ಪ್ರೀತಿ, ನಿಶ್ಮಿತಾ ಮತ್ತು ರಾಶ್ವಿ ಇದ್ದರು.ರನ್ನರ್ ಅಪ್ ಆದ ಬಾಲಕರ ತಂಡದಲ್ಲಿ ಪ್ರೀತಂ (ನಾಯಕ) ಭುವನ್ ಬಿ, ಭುವನ್ ಎಸ್, ರೋಹನ್, ಸ್ವಸ್ತಿಕ್, ನೀರಜ್, ನಿತೇಶ್, ಯತೀಶ, ಸ್ಕಂದ, ಚೇತನ, ಶಿವಮಣಿ, ಲಿಖಿತ್ ಇದ್ದರು. ಇದರಲ್ಲಿ ಚೇತನ, ನಿತೇಶ ಜನಾರ್ದನ ಪೂಜಾರಿ ಹಾಗೂ ಪ್ರೀತಂ ಇದ್ದರು.</p>.<p>ಪ್ರಶಸ್ತಿಗಳೊಂದಿಗೆ ಮರಳಿದ ತಂಡಗಳನ್ನು ಆಲೂರಿನಲ್ಲಿ ಸ್ವಾಗತಿಸಿ ಮೆರವಣಿಗೆ ಮಾಡಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ವೀರೇಂದ್ರ ಜೋಗಿ, ವ್ಯವಸ್ಥಾಪಕ ದಿನಕರ ದೇವಾಡಿಗ, ನಾಗರತ್ನ ಹೇರ್ಳೆ, ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ದತ್ತಾತ್ರೇಯ ಭಟ್, ಶಾಲೆ ದತ್ತು ಸ್ವೀಕರಿಸಿರುವ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಇದ್ದರು.</p>.<p>ಈ ಶಾಲೆಯ ವಿದ್ಯಾರ್ಥಿಗಳು 5 ವರ್ಷಗಳಿಂದ ಥ್ರೋಬಾಲ್ನಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ 2 ಬಾರಿ ಚಾಂಪಿ<br />ಯನ್ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಾಪುರ</strong>: ಆಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಮತ್ತು ಬಾಲಕರ ತಂಡಗಳು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಥ್ರೋಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಚಾಂಪಿಯನ್ ಪಟ್ಟ ಮತ್ತು ರನ್ನರ್ ಅಪ್ ಸ್ಥಾನವನ್ನು ಗಳಿಸಿಕೊಂಡಿವೆ. ಸಾಧನೆ ಮಾಡಿದ ಎರಡೂ ತಂಡಗಳು ವಿಭಾಗ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿವೆ.</p>.<p>ಬಾಲಕಿಯರ ತಂಡದಲ್ಲಿ ಅನನ್ಯ (ನಾಯಕಿ) ಸಾಕ್ಷಿ, ಮಾನಸ, ಭಾಗ್ಯಶ್ರೀ, ಲೇಖನ, ಮಲ್ಲಿಕಾ, ಅಂಕಿತಾ, ಶಿಲ್ಪಾ, ಸಿಂಚನಾ ಶೆಟ್ಟಿ, ಪ್ರೀತಿ, ನಿಶ್ಮಿತಾ ಮತ್ತು ರಾಶ್ವಿ ಇದ್ದರು.ರನ್ನರ್ ಅಪ್ ಆದ ಬಾಲಕರ ತಂಡದಲ್ಲಿ ಪ್ರೀತಂ (ನಾಯಕ) ಭುವನ್ ಬಿ, ಭುವನ್ ಎಸ್, ರೋಹನ್, ಸ್ವಸ್ತಿಕ್, ನೀರಜ್, ನಿತೇಶ್, ಯತೀಶ, ಸ್ಕಂದ, ಚೇತನ, ಶಿವಮಣಿ, ಲಿಖಿತ್ ಇದ್ದರು. ಇದರಲ್ಲಿ ಚೇತನ, ನಿತೇಶ ಜನಾರ್ದನ ಪೂಜಾರಿ ಹಾಗೂ ಪ್ರೀತಂ ಇದ್ದರು.</p>.<p>ಪ್ರಶಸ್ತಿಗಳೊಂದಿಗೆ ಮರಳಿದ ತಂಡಗಳನ್ನು ಆಲೂರಿನಲ್ಲಿ ಸ್ವಾಗತಿಸಿ ಮೆರವಣಿಗೆ ಮಾಡಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ವೀರೇಂದ್ರ ಜೋಗಿ, ವ್ಯವಸ್ಥಾಪಕ ದಿನಕರ ದೇವಾಡಿಗ, ನಾಗರತ್ನ ಹೇರ್ಳೆ, ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ದತ್ತಾತ್ರೇಯ ಭಟ್, ಶಾಲೆ ದತ್ತು ಸ್ವೀಕರಿಸಿರುವ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಇದ್ದರು.</p>.<p>ಈ ಶಾಲೆಯ ವಿದ್ಯಾರ್ಥಿಗಳು 5 ವರ್ಷಗಳಿಂದ ಥ್ರೋಬಾಲ್ನಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ 2 ಬಾರಿ ಚಾಂಪಿ<br />ಯನ್ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>