ಈಚೆಗೆ ಪ್ರಯಾಣಿಕರು ಸಂಚರಿಸುವ ಬಸ್ಗಳಲ್ಲಿ ನಿರ್ವಾಹಕ ಹಾಗೂ ಚಾಲಕರ ನಿರ್ಲಕ್ಷತನದಿಂದ ಪ್ರಯಾಣಿಕರು ಬಸ್ನಿಂದ ಇಳಿಯುವಾಗ ಹಾಗೂ ಹತ್ತುವಾಗ ದುರ್ಘಟನೆಗಳು ನಡೆಯುತ್ತಿವೆ. ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಫುಟ್ಬೋರ್ಡ್ ಮೇಲೆ ಪ್ರಯಾಣ ಅಪಘಾತ ಹೆಚ್ಚಾಗಲು ಕಾರಣವಾಗಿರುತ್ತದೆ. ಇಂತಹ ಘಟನೆಗಳಿಗೆ ಬಸ್ ಚಾಲಕ ಹಾಗೂ ನಿರ್ವಾಹಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.