ಉಡುಪಿ: ಕುಂದಾಪುರ, ಬ್ರಹ್ಮಾವರ, ಉಡುಪಿ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಭಾನುವಾರ ಗುಡುಗು ಸಿಡಿಲು ಸಹಿತ ಮಳೆ ಸುರಿಯಿತು.
ಸಂಜೆಯವರೆಗೂ ಬಿರುಬಿಸಿಲಿನ ವಾತಾವರಣವಿದ್ದು, ಏಕಾಏಕಿ ಮೋಡಕವಿದ ವಾತಾವರಣ ಸೃಷ್ಟಿಯಾಯಿತು. ಬಳಿಕ ಕೆಲಹೊತ್ತು ಗುಡುಗಿನ ಅಬ್ಬರದೊಂದಿಗೆ ಮಳೆ ಸುರಿಯಿತು. ಬಿಸಿಲಿನ ದಗೆಗೆ ಕಂಗೆಟ್ಟಿದ್ದವರಿಗೆ ಮಳೆ ತಂಪೆರೆದ ಅನುಭವ ನೀಡಿತು.