ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ಟಫೆ ಎಕ್ಸೆಸ್ ಸ್ಕೋಡಾ ಶೋಂ ಆರಂಭ

Last Updated 8 ಏಪ್ರಿಲ್ 2021, 16:46 IST
ಅಕ್ಷರ ಗಾತ್ರ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಅಂಬಾಗಿಲಿನ ರಾಮರಾಜ್‌ ಟವರ್‌ನಲ್ಲಿ ಗುರುವಾರ ಸ್ಕೋಡಾ ಅಟೋ ಇಂಡಿಯಾದ ಟಫೆ ಎಕ್ಸೆಸ್ ನೂತನ ಶೋರೂಮ್ ಕಾರ್ಯಾರಂಭ ಮಾಡಿತು.

ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಭಯ್ ಗುಪ್ತ ಅವರು ಕಾರು ಖರೀದಿಸಿದ ಪ್ರಥಮ ಗ್ರಾಹಕರಾದ ಮಣಿಪಾಲ ಕೆನರಾ ಬ್ಯಾಂಕಿನ ಮ್ಯಾನೇಜರ್ ನೀರಜ್ ಶ್ರೀಕಾಂತ್ ಯಾದವ್ ಅವರಿಗೆ ಕಾರಿನ ಕೀ ಹಸ್ತಾಂತರಿಸಿ ಶೋರೂಂ ಉದ್ಘಾಟಿಸಿದರು.

ಬಳಿಕ ಮಾತನಾಡಿ, 1990ರಿಂದ ಸ್ಕೋಡಾ ಕಾರು ಬಳಲುತ್ತಿದ್ದು, ಟಫೆಯಲ್ಲಿಯೇ ಮೊದಲ ಕಾರು ಖರೀದಿಸಿದ್ದು ಸಂತೃಪ್ತ ಭಾವವಿದೆ ಎಂದರು. ಕಂಪೆನಿಯ ಸೇವೆ ಉತ್ತಮವಾಗಿದ್ದು, ಕಾರು ಕೂಡ ಉತ್ತಮ ಗುಣಮಟ್ಟ ಹೊಂದಿದೆ. ಗ್ರಾಹಕರು ಹೆಚ್ಚು ಸಂತೃಪ್ತಿ ಹೊಂದಲಿ ಎಂದು ಹಾರೈಸಿದರು.

ಮಣಿಪಾಲ ಟೆಕ್ನಾಲಜೀಸ್‌ನ ಪ್ರಮೋದ್ ಫೆರ್ನಾಂಡಿಸ್, ಉಡುಪಿ, ಮಂಗಳೂರು, ಶಿವಮೊಗ್ಗ ಸ್ಕೊಡಾ ಶಾಖೆಗಳ ಶಾಖಾ ವ್ಯವಸ್ಥಾಪಕ ಅಬೂಬಕ್ಕರ್ ಸಿದ್ದೀಕ್, ಮಂಗಳೂರು ಶಾಖೆಯ ಸರ್ವೀಸ್ ಮ್ಯಾನೇಜರ್ ವಿನೋದ್ ಡಿಸೋಜ, ಹಿರಿಯ ವ್ಯವಸ್ಥಾಪಕ ವಿದ್ಯಾಧರ್ ಸಿತೂರು, ಕಟ್ಟಡ ಮಾಲೀಕ ಕೆ.ಎಸ್.ಸುರೇಶ್ ರಾವ್, ಉಡುಪಿ ಶಾಖೆಯ ಸಹಾಯಕ ವ್ಯವಸ್ಥಾಪಕ ಹರಿಪ್ರಸಾದ್ ಇದ್ದರು.

ಉಡುಪಿ ಹಾಗೂ ಶಿವಮೊಗ್ಗದಲ್ಲಿ ಹೊಸ ಶೋರೂಂಗಳನ್ನು ಆರಂಭಿಸಲಾಗಿದೆ. ಉಡುಪಿ ಶಾಖೆ ವಿಶಾಲವಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದೆ. ಹೊಸ ಸ್ಕೋಡಾ ರ‍್ಯಾಪಿಡ್ ಟಿಎಸ್ಐ (1 ಲೀಟರ್ ಎಂಜಿನ್, ಕಾರಿನ ಆರಂಭಿಕ ದರ ₹ 7.79 ಲಕ್ಷವಾಗಿದ್ದು, ಹೊಸ ಸೂಪರ್ಬ್‌ ಕಾರು (ಅಡ್ವಾನ್ಸ್‌ಡ್ ಟೆಕ್ನಾಲಜಿ, 2 ಲೀಟರ್ ಇಂಜಿನ್, 190 ಪಿಎಸ್ ಪವರ್) ಮಾರಾಟಕ್ಕೆ ಲಭ್ಯವಿದೆ. ಮಾಹಿತಿಗೆ 7874334444 ಸಂಪರ್ಕಿಸಬಹುದು ಎಂದು ವ್ಯವಸ್ಥಾಪಕ ಅಬೂಬಕ್ಕರ್ ಸಿದ್ದೀಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT