ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ರೋಗಿಗಳಿಗೆ ಉಚಿತ ಕ್ಷೌರ

Last Updated 2 ಅಕ್ಟೋಬರ್ 2019, 14:09 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ 13 ಬಡ ರೋಗಿಗಳಿಗೆ ಜನಶಕ್ತಿ ವೇದಿಕೆಯಿಂದ ಬುಧವಾರ ಉಚಿತವಾಗಿ ಕ್ಷೌರ ಮಾಡಿಸಲಾಯಿತು.

ಹಲವು ರೋಗಿಗಳು ನಾನಾ ಕಾರಣಗಳಿಂದ ಆಸ್ಪತ್ರೆಯಲ್ಲೇ ಇದ್ದಾರೆ. ತಲೆಕೂದಲು, ಗಡ್ಡ, ಮೀಸೆ ಉದ್ದಕ್ಕೆ ಬೆಳೆದು ಕಿರಿಕಿರಿ ಅನುಭವಿಸುತ್ತಿದ್ದರು.ಅವರಿಗೆ ನಡೆದಾಡಲು ಸಾಧ್ಯವಾಗದ ಕಾರಣ ಕ್ಷೌರ ಮಾಡಿಸಿಕೊಳ್ಳಲುಸಾಧ್ಯವಾಗಿರಲಿಲ್ಲ. ಹಾಗಾಗಿ ಕ್ಷೌರಿಕನನ್ನು ಆಸ್ಪತ್ರೆಗೆ ಕರೆಯಿಸಿ ಆರೈಕೆ ಮಾಡಲಾಯಿತು.

ರೋಗಿಗಳಿಗೆ ಹೊಸ ಬಟ್ಟೆ, ಶ್ಯಾಂಪು, ಸಾಬೂನು ನೀಡಿ ಸ್ವಚ್ಛತೆಯ ಬಗ್ಗೆ ತಿಳಿಸಲಾಯಿತು.

ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್, ಸುರೇಶ್ ನಾಯ್ಕ, ಸಿ.ಎನ್.ನಾಯ್ಕ, ಖೈರುನ್ನೀಸಾ, ಕಾಶಿನಾಥ ನಾಯ್ಕ, ದೀಪಾಶ್ರೀ, ಮಾಧುರಿ ಹುಂಗೇಕರ್, ಫಕೀರಪ್ಪ ಭಂಡಾರಿ, ದೀಪಕ್ ನಾಯ್ಕ, ರಾಜೀವ ನಾಯ್ಕ, ಸಂದೇಶ ನಾಯ್ಕ, ಅಲ್ತಾಫ್ ಶೇಖ್, ಇಬ್ರಾಹಿಂ ಕಲ್ಲೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT