‘ಅತಿ ಎತ್ತರಕ್ಕೆ ಏರಿದವರಿಂದ ಕೆಳಗೆ ಇರುವವರ ಅವಕಾಶಗಳಿಗೆ ಅಡ್ಡಿ ತರುವಂಥ ಕೆಲಸವಾಗುತ್ತಿದೆ. ಇದು ಸರಿಯಲ್ಲ. ಮಠಾಧೀಶರು ಶೋಷಿತರನ್ನು ಮೇಲೆತ್ತುವ ಕೆಲಸ ಮಾಡಬೇಕು. ಎತ್ತರದಲ್ಲಿರುವ ಬಹುಸಂಖ್ಯಾತ ‘ಆನೆ’ ಬಿದ್ದರೆ ಸಣ್ಣಪುಟ್ಟ ಜನಾಂಗಗಳು ಇಲಿ, ಇರುವೆಗಳಂತೆ ಅಪ್ಪಚ್ಚಿಯಾಗುತ್ತವೆ. ಸರ್ಕಾರಗಳು, ಎಲ್ಲ ಪಕ್ಷಗಳು ಮತಕ್ಕಾಗಿ ಕಣ್ಮುಚ್ಚಿ ಕುಳಿತಿವೆ. ಇದರಿಂದಾಗಿ ಆಯಾ ಜಾತಿಗಳ ಹಿತರಕ್ಷಣೆ ಮುಖ್ಯವಾಗುತ್ತಿದೆ’ ಎಂದರು.