ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿಯ ದತ್ತಾತ್ರಯ ಹೆಗಡೆ ಬಂಧಿತ ಆರೋಪಿ. ಅವರು 1997ರ ಡಿ.19ರಂದು ಅಣ್ಣಪ್ಪ ರಾಯ್ಕರ್ ಎಂಬುವವರಿಂದ ಹಣ ಪಡೆದುಕೊಂಡಿದ್ದರು. ಆದರೆ, ಅದನ್ನು ಪುನಃ ಕೊಡದೇ ವಂಚಿಸಿದ್ದಾಗಿ ನಗರ ಠಾಣೆಯಲ್ಲಿ 1998ರಲ್ಲಿ ದೂರು ದಾಖಲಾಗಿತ್ತು. ರಾಜ್ಯದ ಹಲವು ಕಡೆ ಹುಡುಕಿದರೂ ಆರೋಪಿಯು ಸಿಕ್ಕಿರಲಿಲ್ಲ. ದಸ್ತಗಿರಿ ವಾರಂಟ್ ಜಾರಿ ಮಾಡಿದಾಗ ನ್ಯಾಯಾಲಯಕ್ಕೂ ಹಾಜರಾಗಿರಲಿಲ್ಲ.