‘ಕಡಿಮೆ ನಿರ್ವಹಣೆ, ಅತ್ಯಲ್ಪ ನೀರು ಬಯಸುವ ಈ ಬೆಳೆ ಎಲ್ಲ ಹವಾಮಾನದಲ್ಲೂ ಉತ್ತಮ ಇಳುವರಿ ನೀಡುತ್ತದೆ. ಉತ್ತರ ಕನ್ನಡಕ್ಕೆ ಹೋಲಿಸಿದರೆ, ರಾಯಚೂರಿನಲ್ಲಿ ಇಳುವರಿ ಪ್ರಮಾಣ ಕೊಂಚ ಕಡಿಮೆಯಿದೆ. ಬೇಸಾಯದ ಬಗೆ, ಬೀಜದ ಪ್ರಮಾಣ, ಬಿತ್ತನೆ, ನಾಟಿ ಮೊದಲಾದ 10 ಮಾದರಿಯ ಪ್ರಯೋಗವನ್ನು ಕೃಷಿ ಇಲಾಖೆಯ ‘ಆತ್ಮ’ ಯೋಜನೆ ಮೂಲಕ ನರೇಬೈಲ್ನಲ್ಲಿ ನಡೆಸಲಾಗಿದೆ. ಸಾಲು ಬಿತ್ತನೆಯಲ್ಲಿ ಹೆಚ್ಚು ಫಸಲು ದೊರೆತಿದೆ’ ಎಂದು ತಿಳಿಸಿದರು.