ಮೇ 5ರಂದು ಬೆಂಗಳೂರಿನ ದಯಾನಂದ ಸಾಗರ ವಿಶ್ವವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಲಾಗುತ್ತದೆ. ಚಿತ್ರಕಲೆಯ ಅತಿಥಿ ಶಿಕ್ಷಕರಾಗಿ ಶ್ರೀನಿಕೇತನ ಶಾಲೆ, ಎಂಇಎಸ್ ಶಾಲೆ ಹಾಗೂ ಭೈರುಂಬೆ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿ.ಎಂ.ಬೊಮ್ನಳ್ಳಿ ಅವರು ಮಕ್ಕಳಿಗಾಗಿ ರಚಿಸಿರುವ ‘ಸೊನ್ನೆ ಚಿತ್ರ‘ ಪುಸ್ತಕ 15ಸಾವಿರ ಮಕ್ಕಳನ್ನು ತಲುಪಿಸಿದೆ. ಇದನ್ನು ಪರಿಗಣಿಸಿ, ಅವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.