ಈ ಮಾಹಿತಿ ಹಿನ್ನೆಲೆಯಲ್ಲಿ ಬಯಲು ಸೀಮೆ ಹಾಗೂ ಮಲೆನಾಡಿನಲ್ಲಿ ಸುಮಾರು 5000 ಎಕರೆ ಪ್ರದೇಶದಲ್ಲಿ 25 ಸ್ಥಳಗಳಲ್ಲಿ ಔಷಧ ಸಸ್ಯ ಬೆಳೆಸಲು ವಿಶೇಷ ಯೋಜನೆ ರೂಪಿಸಿ ಜಾರಿ ಮಾಡಬೇಕು. ರೈತರಿಗೆ ಸೋಲಾರ್ ಯೋಜನೆ, ಹಿತ್ತಲಿನಲ್ಲಿ ತರಕಾರಿ, ಹಣ್ಣು ಬೆಳೆಸಲು ಹಿತ್ತಲು ಹೊನ್ನು ಯೋಜನೆ, 100 ಕೆರೆಗಳ ಪುನಶ್ಚೇತನ ಕಾರ್ಯಕ್ರಮ ರೂಪಿಸಲು, ಬಜೆಟ್ನಲ್ಲಿ ಅನುದಾನ ನಿಗದಿಗೊಳಿಸಬೇಕು ಎಂದು ಅವರು ವಿನಂತಿಸಿದರು.