ಯಲ್ಲಾಪುರ ಬ್ಲಾಕ್ಗೆ ಡಿ.ಎನ್.ಗಾಂವಕರ, ಮುಂಡಗೋಡ ಬ್ಲಾಕ್ಗೆ ಕೃಷ್ಣ ಹಿರೇಹಳ್ಳಿ, ಬನವಾಸಿ ಬ್ಲಾಕ್ಗೆ ಸಿ.ಎಫ್.ನಾಯ್ಕ ಆಯ್ಕೆಯಾಗಿದ್ದು, ಅವರಿಗೆ ನೇಮಕಾತಿ ಪತ್ರವನ್ನು ಮಂಗಳವಾರ ಇಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹಸ್ತಾಂತರಿಸಿದರು. ‘ಜಿಲ್ಲೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಶಾಸಕ ಆರ್.ವಿ. ದೇಶಪಾಂಡೆ, ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ಬ್ಲಾಕ್ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಗಿದೆ. ತಕ್ಷಣವೇ ಬ್ಲಾಕ್ ಅಧ್ಯಕ್ಷರು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರ ಜೊತೆ ಸೇರಿ ಪಕ್ಷ ಬಲವರ್ಧನೆ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು’ ಎಂದರು.