ತಾಲ್ಲೂಕಿನ ಮೂಡುಶಿರಾಲಿಯ ಜಗದೀಶ ಮಾದೇವ ನಾಯ್ಕ ಎಂಬುವವರು ₹ 1ಲಕ್ಷ ಮೌಲ್ಯದ ಎರಡೂವರೆ ತೊಲೆ ಚಿನ್ನರ ಸರ ಕಳೆದುಕೊಂಡವರು. ಸ್ಕೂಟರ್ನಲ್ಲಿದ್ದ ಮೂವರ ಪೈಕಿ ಒಬ್ಬ, ಜಗದೀಶ ಅವರ ಕುತ್ತಿಗೆಗೆ ಕೈಹಾಕಿ ಚಿನ್ನದ ಸರ ಎಗರಿಸಿದ್ದಾನೆ. ತಕ್ಷಣ ಸಮಯಪ್ರಜ್ಞೆ ಮೆರೆದ ಜಗದೀಶ್ ಹಾಗೂ ಅವರ ಸಹೋದರ, ಕಾರಿನಲ್ಲೇ ಸರ ಎಗರಿಸಿದವರನ್ನು ಹಿಂಬಾಲಿಸಿ, ಹಿಡಿದು ಥಳಿಸಿದ್ದಾರೆ. ಇದನ್ನು ಕಂಡು ನೂರಾರು ಜನರು ಜಮಾಯಿಸಿ ಏನಾಯಿತೆಂದು ವಿಚಾರಿಸಿದರು. ಜಗದೀಶ ಅವರನ್ನು ಸಮಾಧಾನಪಡಿಸಿ ಕಾರಿನತ್ತ ಕರೆದುಕೊಂಡು ಹೋಗುವಷ್ಟರಲ್ಲಿ, ಮೂವರು ಕಳ್ಳರು ಸ್ಕೂಟರ್ ಏರಿ ಪರಾರಿಯಾಗಿದ್ದಾರೆ. ಕಳ್ಳರ ಪೈಕಿ ಒಬ್ಬ ವ್ಯಕ್ತಿಯನ್ನು ಜನರು ಗುರುತಿಸಿದ್ದಾರೆ. ಜಗದೀಶ ಅವರ ಕುತ್ತಿಗೆಗೆ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.