‘ಚನ್ನಭೈರಾದೇವಿಯು ಅಪ್ರತಿಮ ಹೋರಾಟಗಾರ್ತಿಯಾಗಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿ ರಾಜ್ಯಭಾರ ಮಾಡಿದ ರಾಣಿ. ಅವರ ಬಗ್ಗೆ ಹೆಚ್ಚಾಗಿ ಪ್ರಚಾರವಾಗಿಲ್ಲ. ಆದ್ದರಿಂದ ಆ ರಾಣಿಯ ಸ್ಮಾರಕ ನಿರ್ಮಾಣಕ್ಕೆ 10 ಎಕರೆ ಜಾಗವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಕೋರಿದ್ದರು. ಸರ್ಕಾರವು ಸ್ಪಂದಿಸಿದ್ದು, ಜಾಗ ಮಂಜೂರು ಮಾಡಿದೆ. ರಾಣಿಯ ಶೌರ್ಯ-ಪರಾಕ್ರಮ, ಜೀವನಗಾಥೆ ಕುರಿತ ವರ್ಣಚಿತ್ರಗಳು, ಸಾಹಿತ್ಯ ಮತ್ತು ಡಾಕ್ಯುಮೆಂಟರಿಗಳನ್ನು ಸ್ಮಾರಕ ಒಳಗೊಂಡಿರಲಿದೆ’ ಎಂದು ಮಾಹಿತಿ ನೀಡಿದರು.