‘ಯೇಸು ವಿಶ್ವಮಾನವರಾಗಿ ಎಲ್ಲರ ಉದ್ಧಾರಕ್ಕಾಗಿ ಧರೆಗೆ ಬಂದವರು. ಪ್ರೀತಿಯೇ ದೇವರು. ಪ್ರತಿಯೊಬ್ಬರೂದೇವರ ಸ್ವರೂಪವಾಗಿದ್ದು, ಅದೃಶ್ಯ ದೇವರ ಸದೃಶ್ಯ ರೂಪ ಮನುಷ್ಯನಾಗಿದ್ದಾನೆ. ಜಾತಿ, ಮತ, ಪಂಥ ಭೇದ-ಭಾವಗಳಿಲ್ಲದೆ ಜೀವನ ನಡೆಸುವುದು ಇಂದಿನ ಅಗತ್ಯವಾಗಿದೆ. ಭೂಮಿ ಮೇಲಿರುವ ಪ್ರತಿಯೊಬ್ಬ ಮಾನವರೂ ಶಾಂತಿ ಸಂದೇಶಕ್ಕೆ ಒತ್ತು ನೀಡಬೇಕು. ಧರ್ಮ ನಡುವೆ, ಜಾತಿಗಳ ನಡುವೆ ದ್ವೇಷ, ಅಸೂಯೆಗಳು ಬೆಳೆಯುತ್ತಿದ್ದು, ಇವುಗಳನ್ನು ಹೋಗಲಾಡಿಸಬೇಕು’ಎಂದು ಹೇಳಿದರು.