<p><strong>ಭಟ್ಕಳ:</strong> ‘ಮುಂಬೈನಿಂದ ಭಟ್ಕಳಕ್ಕೆ ಬರುವಾಗಲೇ ನನಗೆ ಕೋವಿಡ್ ಪಾಸಿಟಿವ್ ಇರಬಹುದು ಎಂಬ ಆತಂಕವಿತ್ತು. ಅದು ನಿಜವೂ ಆಗಿ ಆತಂಕ ಮತ್ತಷ್ಟು ಹೆಚ್ಚಾದಾಗ ಕುಟುಂಬದವರು, ವೈದ್ಯರು ನನ್ನ ಗಾಬರಿಯನ್ನು ದೂರ ಮಾಡಿ ಧೈರ್ಯ ಹೇಳಿದರು. ಸುಮಾರು 20 ದಿನಗಳ ಆರೈಕೆಯ ಬಳಿಕ ಕೋವಿಡ್ನಿಂದ ಗುಣಮುಖವಾಗಿ ಕುಟುಂಬದವರೊಂದಿಗೆ ಖುಷಿಯಾಗಿದ್ದೇನೆ..’</p>.<p>ಕೋವಿಡ್ನಿಂದಗುಣಮುಖರಾಗಿರುವ, ಭಟ್ಕಳ ಪಟ್ಟಣದಲ್ಲಿ ಹಾಟ್ಸ್ಪಾಟ್ ಆಗಿ ಸೀಲ್ಡೌನ್ ಆಗಿದ್ದ ಮದೀನಾ ಕಾಲೊನಿಯ 25 ವರ್ಷದ ಯುವಕ ಮೊಹಮ್ಮದ್ ನೂಹ್ ‘ಪ್ರಜಾವಾಣಿ’ಯೊಂದಿಗೆ ತಮ್ಮಅನುಭವವನ್ನು ಹೀಗೆ ವಿವರಿಸಿದರು.</p>.<p>‘ನಾನು ಮುಂಬೈನಲ್ಲಿ ಖಾಸಗಿಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದೆ. ಆ ಮಹಾನಗರದಲ್ಲಿಸೋಂಕಿತರ ಸಂಖ್ಯೆಏರುಗತಿಯಲ್ಲಿ ಸಾಗುತ್ತಿತ್ತು.ನನಗೆಕೋವಿಡ್ಪಾಸಿಟಿವ್ ಇರುವುದು ದೃಢವಾಗಿತ್ತು. ಮುಂಬೈನಿಂದಭಟ್ಕಳಕ್ಕೆಬಂದವನೇ ಪರೀಕ್ಷೆಗೊಳಪಟ್ಟು, ಐದು ದಿನಕ್ವಾರಂಟೈನ್ ಆಗಿದ್ದೆ...’</p>.<p>‘ಹಲವು ತಿಂಗಳ ಬಳಿಕ ಊರಿಗೆ ಬಂದರೂ ತಂದೆ, ತಾಯಿ, ಸಹೋದರ, ಸಹೋದರಿಯರನ್ನು ನೋಡಲಾಗಲಿಲ್ಲ. ಈಬಗ್ಗೆ ತುಂಬಾ ನೋವೂ ಆಯಿತು. ಎಲ್ಲರಿಗೂ ನಾನೇ ವಿಷಯ ತಿಳಿಸಿದೆ. ಆಗ ನನ್ನ ಕುಟುಂಬದವರೆಲ್ಲಾ ಧೈರ್ಯ ತುಂಬಿದರಲ್ಲದೇ ಕೋವಿಡ್ ಬಗ್ಗೆ ನನ್ನಲ್ಲಿದ್ದ ಆತಂಕವನ್ನು ದೂರ ಮಾಡಿದರು. ಐದು ದಿನಗಳ ಬಳಿಕ ಭಟ್ಕಳದಿಂದ ನನ್ನನ್ನು ಚಿಕಿತ್ಸೆಗೆ ಕಾರವಾರದ ‘ಕ್ರಿಮ್ಸ್’ಗೆ ಕರೆದುಕೊಂಡು ಹೋದಾಗ ನನಗೆ ಆಗ ನಿಜವಾಗಲೂ ಅನಾಥ ಎನಿಸಿತು..’</p>.<p>‘ಅಲ್ಲಿನ ವೈದ್ಯರು ನನ್ನನ್ನು ಸಹೋದರನಂತೆ ಕಂಡರು.ಸೋಂಕಿನಬಗ್ಗೆ ಇದ್ದ ಆತಂಕವನ್ನು ಮೊದಲು ದೂರ ಮಾಡಿದರು. ಅವರು ಉತ್ತಮ ಚಿಕಿತ್ಸೆಯನ್ನೂ ನೀಡಿದರು. ಆದರೆ,ಕೊರೊನಾ ಬಗ್ಗೆ ನನಗಿದ್ದ ಹೆದರಿಕೆಯಿಂದಾಗಿ ಗುಣಮುಖನಾಗಲುಮತ್ತೂ ಮೂರ್ನಾಲ್ಕು ದಿನ ತಡವಾಯಿತು. ಸುಮಾರು 15 ದಿನಗಳ ಬಳಿಕ ನನಗೆ ನೆಗೆಟಿವ್ ವರದಿ ಬಂದು ಬಿಡುಗಡೆಯಾದೆ. ಆಗ ಪ್ರಪಂಚವನ್ನೇ ಗೆದ್ದಷ್ಟು ಸಂತಸವಾಯಿತು...’</p>.<p>‘ಕೋವಿಡ್ಪಾಸಿಟಿವ್ ಬಂದ ಕೂಡಲೇ ಯಾರೂ ಆತಂಕಗೊಳ್ಳುವ ಬದಲು ಧೈರ್ಯ ತೆಗೆದುಕೊಳ್ಳಬೇಕು. ಇದೊಂದು ಸಣ್ಣ ಕಾಯಿಲೆ ಎಂದು ತಿಳಿದುಕೊಳ್ಳಬೇಕು. ದೈನಂದಿನ ಚಟುವಟಿಕೆಯಲ್ಲಿ ಸ್ವಲ್ಪ ಬದಲಾವಣೆ, ಆಹಾರದಲ್ಲಿ ಪಥ್ಯ ಮತ್ತು ಶುಚಿತ್ವ ಕಾಪಾಡಿಕೊಂಡರೆಕೊರೊನಾನಮ್ಮಿಂದ ಬಹುದೂರ ಇರುತ್ತದೆ. ಆತಂಕಪಡದೇ ಧೈರ್ಯ ತೆಗೆದುಕೊಂಡರೆ, ಕೊರೊನಾವನ್ನು ಅರ್ಧ ಗೆದ್ದಂತೆ. ಸರ್ಕಾರದ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿದರೆ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಸಾಧ್ಯ.’</p>.<p><strong>ನಿರೂಪಣೆ: ರಾಘವೇಂದ್ರ ಭಟ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ:</strong> ‘ಮುಂಬೈನಿಂದ ಭಟ್ಕಳಕ್ಕೆ ಬರುವಾಗಲೇ ನನಗೆ ಕೋವಿಡ್ ಪಾಸಿಟಿವ್ ಇರಬಹುದು ಎಂಬ ಆತಂಕವಿತ್ತು. ಅದು ನಿಜವೂ ಆಗಿ ಆತಂಕ ಮತ್ತಷ್ಟು ಹೆಚ್ಚಾದಾಗ ಕುಟುಂಬದವರು, ವೈದ್ಯರು ನನ್ನ ಗಾಬರಿಯನ್ನು ದೂರ ಮಾಡಿ ಧೈರ್ಯ ಹೇಳಿದರು. ಸುಮಾರು 20 ದಿನಗಳ ಆರೈಕೆಯ ಬಳಿಕ ಕೋವಿಡ್ನಿಂದ ಗುಣಮುಖವಾಗಿ ಕುಟುಂಬದವರೊಂದಿಗೆ ಖುಷಿಯಾಗಿದ್ದೇನೆ..’</p>.<p>ಕೋವಿಡ್ನಿಂದಗುಣಮುಖರಾಗಿರುವ, ಭಟ್ಕಳ ಪಟ್ಟಣದಲ್ಲಿ ಹಾಟ್ಸ್ಪಾಟ್ ಆಗಿ ಸೀಲ್ಡೌನ್ ಆಗಿದ್ದ ಮದೀನಾ ಕಾಲೊನಿಯ 25 ವರ್ಷದ ಯುವಕ ಮೊಹಮ್ಮದ್ ನೂಹ್ ‘ಪ್ರಜಾವಾಣಿ’ಯೊಂದಿಗೆ ತಮ್ಮಅನುಭವವನ್ನು ಹೀಗೆ ವಿವರಿಸಿದರು.</p>.<p>‘ನಾನು ಮುಂಬೈನಲ್ಲಿ ಖಾಸಗಿಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದೆ. ಆ ಮಹಾನಗರದಲ್ಲಿಸೋಂಕಿತರ ಸಂಖ್ಯೆಏರುಗತಿಯಲ್ಲಿ ಸಾಗುತ್ತಿತ್ತು.ನನಗೆಕೋವಿಡ್ಪಾಸಿಟಿವ್ ಇರುವುದು ದೃಢವಾಗಿತ್ತು. ಮುಂಬೈನಿಂದಭಟ್ಕಳಕ್ಕೆಬಂದವನೇ ಪರೀಕ್ಷೆಗೊಳಪಟ್ಟು, ಐದು ದಿನಕ್ವಾರಂಟೈನ್ ಆಗಿದ್ದೆ...’</p>.<p>‘ಹಲವು ತಿಂಗಳ ಬಳಿಕ ಊರಿಗೆ ಬಂದರೂ ತಂದೆ, ತಾಯಿ, ಸಹೋದರ, ಸಹೋದರಿಯರನ್ನು ನೋಡಲಾಗಲಿಲ್ಲ. ಈಬಗ್ಗೆ ತುಂಬಾ ನೋವೂ ಆಯಿತು. ಎಲ್ಲರಿಗೂ ನಾನೇ ವಿಷಯ ತಿಳಿಸಿದೆ. ಆಗ ನನ್ನ ಕುಟುಂಬದವರೆಲ್ಲಾ ಧೈರ್ಯ ತುಂಬಿದರಲ್ಲದೇ ಕೋವಿಡ್ ಬಗ್ಗೆ ನನ್ನಲ್ಲಿದ್ದ ಆತಂಕವನ್ನು ದೂರ ಮಾಡಿದರು. ಐದು ದಿನಗಳ ಬಳಿಕ ಭಟ್ಕಳದಿಂದ ನನ್ನನ್ನು ಚಿಕಿತ್ಸೆಗೆ ಕಾರವಾರದ ‘ಕ್ರಿಮ್ಸ್’ಗೆ ಕರೆದುಕೊಂಡು ಹೋದಾಗ ನನಗೆ ಆಗ ನಿಜವಾಗಲೂ ಅನಾಥ ಎನಿಸಿತು..’</p>.<p>‘ಅಲ್ಲಿನ ವೈದ್ಯರು ನನ್ನನ್ನು ಸಹೋದರನಂತೆ ಕಂಡರು.ಸೋಂಕಿನಬಗ್ಗೆ ಇದ್ದ ಆತಂಕವನ್ನು ಮೊದಲು ದೂರ ಮಾಡಿದರು. ಅವರು ಉತ್ತಮ ಚಿಕಿತ್ಸೆಯನ್ನೂ ನೀಡಿದರು. ಆದರೆ,ಕೊರೊನಾ ಬಗ್ಗೆ ನನಗಿದ್ದ ಹೆದರಿಕೆಯಿಂದಾಗಿ ಗುಣಮುಖನಾಗಲುಮತ್ತೂ ಮೂರ್ನಾಲ್ಕು ದಿನ ತಡವಾಯಿತು. ಸುಮಾರು 15 ದಿನಗಳ ಬಳಿಕ ನನಗೆ ನೆಗೆಟಿವ್ ವರದಿ ಬಂದು ಬಿಡುಗಡೆಯಾದೆ. ಆಗ ಪ್ರಪಂಚವನ್ನೇ ಗೆದ್ದಷ್ಟು ಸಂತಸವಾಯಿತು...’</p>.<p>‘ಕೋವಿಡ್ಪಾಸಿಟಿವ್ ಬಂದ ಕೂಡಲೇ ಯಾರೂ ಆತಂಕಗೊಳ್ಳುವ ಬದಲು ಧೈರ್ಯ ತೆಗೆದುಕೊಳ್ಳಬೇಕು. ಇದೊಂದು ಸಣ್ಣ ಕಾಯಿಲೆ ಎಂದು ತಿಳಿದುಕೊಳ್ಳಬೇಕು. ದೈನಂದಿನ ಚಟುವಟಿಕೆಯಲ್ಲಿ ಸ್ವಲ್ಪ ಬದಲಾವಣೆ, ಆಹಾರದಲ್ಲಿ ಪಥ್ಯ ಮತ್ತು ಶುಚಿತ್ವ ಕಾಪಾಡಿಕೊಂಡರೆಕೊರೊನಾನಮ್ಮಿಂದ ಬಹುದೂರ ಇರುತ್ತದೆ. ಆತಂಕಪಡದೇ ಧೈರ್ಯ ತೆಗೆದುಕೊಂಡರೆ, ಕೊರೊನಾವನ್ನು ಅರ್ಧ ಗೆದ್ದಂತೆ. ಸರ್ಕಾರದ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿದರೆ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಸಾಧ್ಯ.’</p>.<p><strong>ನಿರೂಪಣೆ: ರಾಘವೇಂದ್ರ ಭಟ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>