ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ: ಯುವಕನನ್ನು ಎಳೆದೊಯ್ದ ಮೊಸಳೆ

Last Updated 7 ಫೆಬ್ರುವರಿ 2022, 16:16 IST
ಅಕ್ಷರ ಗಾತ್ರ

ದಾಂಡೇಲಿ (ಉತ್ತರ ಕನ್ನಡ ಜಿಲ್ಲೆ): ಕೆಲಸ ಮುಗಿಸಿ ಇಲ್ಲಿನ ಕಾಳಿ ನದಿಯಲ್ಲಿ ಕೈತೊಳೆಯಲು ಹೋದ ಪಟೇಲ ನಗರದ ನಿವಾಸಿ ಹರ್ಷದ್‌ಖಾನ್ ರಾಯಚೂರು (24) ಎಂಬಾತನನ್ನು ಸೋಮವಾರ ಸಂಜೆ ಮೊಸಳೆ ಎಳೆದುಕೊಂಡು ಹೋಗಿದೆ.

‘ನದಿಯಲ್ಲಿದ್ದ ಮೊಸಳೆ ಏಕಾಏಕಿ ಯುವಕನ ಮೇಲೆ ದಾಳಿ ಮಾಡಿ,ಎಳೆದುಕೊಂಡು ಹೋಗಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸರು ಧಾವಿಸಿ ನದಿಯಲ್ಲಿ ಯುವಕನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಇಲ್ಲಿನ ವಿನಾಯಕ ನಗರದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಈಚೆಗೆ ನದಿ ಅಂಚಿನ ಜನರ ಮೇಲೆ ಮೊಸಳೆ ದಾಳಿ ಹೆಚ್ಚುತ್ತಿದ್ದು ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT