ಕುಮಟಾದಲ್ಲಿ ಸೀಬರ್ಡ್, ಐಆರ್ಬಿ ಅಧಿಕಾರಿಹಾಗೂವಿವಿಧ ಹಂತಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಭೂಸ್ವಾಧೀನ ಆಗಿದ್ದರೂ ಕಾಮಗಾರಿ ತ್ವರಿತವಾಗಿ ಆಗದಿರುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು. ಕಾಮಗಾರಿ ನಡೆಯುತ್ತಿರುವ ಕಾರಣವಾಹನಸಂಚಾರದಲ್ಲಿ ಭಾರಿವ್ಯತ್ಯಯಗಳಾಗುತ್ತಿವೆ. ಅಪಘಾತಗಳೂ ಹೆಚ್ಚುತ್ತಿವೆ. ಮಳೆಗಾಲವಾದ್ದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುತ್ತಿದೆಎಂದು ಕಳವಳ ವ್ಯಕ್ತಪಡಿಸಿದರು.