‘ತಂದೆ, ಮಗಳಿಗೆ ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ, ಜ್ವರ ಹಾಗೂ ನೆಗೆಡಿ ಲಕ್ಷಣ ಕಂಡುಬಂದಿದ್ದರಿಂದ ಗಂಟಲುದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಮತ್ತೊಮ್ಮೆ ಕಾರವಾರ ಹಾಗೂ ಬೆಂಗಳೂರಿಗೆ ಮಾದರಿಗಳನ್ನು ಕಳಿಸಲು ನಿರ್ಧರಿಸಲಾಗಿದೆ. ಸೋಂಕಿತ ಪುರುಷ ವ್ಯಾಪಾರಿ ಆಗಿದ್ದು, ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಗುರುತಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ. ಸಭೆ, ಕಾರ್ಯಕ್ರಮದಲ್ಲಿ ಇವರು ಪಾಲ್ಗೊಂಡಿದ್ದರೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.