<p><strong>ಯಲ್ಲಾಪುರ: </strong>ಪಟ್ಟಣದ ಬಸವೇಶ್ವರ ಕಾಂಪ್ಲೆಕ್ಸ್ನಲ್ಲಿರುವ ದೇವೂ ಸ್ವೀಟ್ಸ್ ಮತ್ತು ಬೇಕರಿಗೆ ಶುಕ್ರವಾರ ತಡರಾತ್ರಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.</p>.<p>ವಿದ್ಯುತ್ ಶಾರ್ಟ್ ಸರ್ಕೀಟ್ನಿಂದಾಗಿ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದೆ. ಶುಕ್ರವಾರ ಸಂಜೆ ಮಳೆ, ಗಾಳಿ ಇತ್ತು. ಎರಡು ಮೂರು ಬಾರಿ ವಿದ್ಯುತ್ ಸ್ಥಗಿತಗೊಂಡು, ಪುನಃ ಬಂದಿತ್ತು. ಆ ಸಂದರ್ಭದಲ್ಲಿ ಹೆಚ್ಚಿನ ವೋಲ್ಟೇಜ್ ಬಂದು ಶಾರ್ಟ್ ಸರ್ಕೀಟ್ ಆಗಿರುವ ಸಾಧ್ಯತೆಯಿದೆ.</p>.<p>ಇದನ್ನೂ ಓದಿ:<a href="https://www.prajavani.net/district/uthara-kannada/fishing-boats-take-shelter-in-karwar-harbor-830528.html" itemprop="url">ಚಂಡಮಾರುತ: ಕಾರವಾರ ಬಂದರಿಗೆ ಮರಳಿದ ದೋಣಿಗಳು </a></p>.<p>ಬೆಂಕಿ ಒಳಗಿನಿಂದಲೇ ಸುಡುತ್ತಾ ಸಾಮಗ್ರಿಗಳನ್ನು, ಕೌಂಟರ್, ಎಲ್ಲವನ್ನೂ ಆಹುತಿ ತೆಗೆದುಕೊಂಡಿದೆ. ಅಂಗಡಿಯ ಶಟರ್ಸ್ ಒಳಗಿನಿಂದ ದಟ್ಟವಾದ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಎದುರು ಕಾಂಪ್ಲೆಕ್ಸ್ನಲ್ಲಿರುವ ಸುವರ್ಣ ಬ್ಯಾಂಕಿನ ಭದ್ರತಾ ಸಿಬ್ಬಂದಿ ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.</p>.<p>ಪೊಲೀಸರು, ಅಗ್ನಿಶಾಮಕ ದಳದವರು ಸಾಹಸಪಟ್ಟು ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಬೆಂಕಿ ಇತರ ಅಂಗಡಿಗಳಿಗೆ ಹಬ್ಬಿಲ್ಲ. ಇಲ್ಲವಾದಲ್ಲಿ ಇಡೀ ಕಾಂಪ್ಲೆಕ್ಸ್ ಬೆಂಕಿಗೆ ಆಹುತಿಯಾಗುತ್ತಿತ್ತು.</p>.<p>'ಕೌಂಟರ್, ಫ್ರಿಜ್ ಎಲ್ಲಾ ಸಾಮಗ್ರಿ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿಯಾಗಿದೆ. ಎಲ್ಲಾ ಸುಟ್ಟು ಹೋಗಿದ್ದು, ಮತ್ತೆ ಮೊದಲಿನಿಂದ ಆರಂಭಿಸಬೇಕಾಗಿದೆ. ಇಲ್ಲಿನ ಗ್ರಾಮದೇವಿ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ' ಎಂದು ಅಂಗಡಿ ಮಾಲೀಕ ದೇವರಾಮ್ ರಾಥೋಡ್ ಕಣ್ಣೀರಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ: </strong>ಪಟ್ಟಣದ ಬಸವೇಶ್ವರ ಕಾಂಪ್ಲೆಕ್ಸ್ನಲ್ಲಿರುವ ದೇವೂ ಸ್ವೀಟ್ಸ್ ಮತ್ತು ಬೇಕರಿಗೆ ಶುಕ್ರವಾರ ತಡರಾತ್ರಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.</p>.<p>ವಿದ್ಯುತ್ ಶಾರ್ಟ್ ಸರ್ಕೀಟ್ನಿಂದಾಗಿ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದೆ. ಶುಕ್ರವಾರ ಸಂಜೆ ಮಳೆ, ಗಾಳಿ ಇತ್ತು. ಎರಡು ಮೂರು ಬಾರಿ ವಿದ್ಯುತ್ ಸ್ಥಗಿತಗೊಂಡು, ಪುನಃ ಬಂದಿತ್ತು. ಆ ಸಂದರ್ಭದಲ್ಲಿ ಹೆಚ್ಚಿನ ವೋಲ್ಟೇಜ್ ಬಂದು ಶಾರ್ಟ್ ಸರ್ಕೀಟ್ ಆಗಿರುವ ಸಾಧ್ಯತೆಯಿದೆ.</p>.<p>ಇದನ್ನೂ ಓದಿ:<a href="https://www.prajavani.net/district/uthara-kannada/fishing-boats-take-shelter-in-karwar-harbor-830528.html" itemprop="url">ಚಂಡಮಾರುತ: ಕಾರವಾರ ಬಂದರಿಗೆ ಮರಳಿದ ದೋಣಿಗಳು </a></p>.<p>ಬೆಂಕಿ ಒಳಗಿನಿಂದಲೇ ಸುಡುತ್ತಾ ಸಾಮಗ್ರಿಗಳನ್ನು, ಕೌಂಟರ್, ಎಲ್ಲವನ್ನೂ ಆಹುತಿ ತೆಗೆದುಕೊಂಡಿದೆ. ಅಂಗಡಿಯ ಶಟರ್ಸ್ ಒಳಗಿನಿಂದ ದಟ್ಟವಾದ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಎದುರು ಕಾಂಪ್ಲೆಕ್ಸ್ನಲ್ಲಿರುವ ಸುವರ್ಣ ಬ್ಯಾಂಕಿನ ಭದ್ರತಾ ಸಿಬ್ಬಂದಿ ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.</p>.<p>ಪೊಲೀಸರು, ಅಗ್ನಿಶಾಮಕ ದಳದವರು ಸಾಹಸಪಟ್ಟು ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಬೆಂಕಿ ಇತರ ಅಂಗಡಿಗಳಿಗೆ ಹಬ್ಬಿಲ್ಲ. ಇಲ್ಲವಾದಲ್ಲಿ ಇಡೀ ಕಾಂಪ್ಲೆಕ್ಸ್ ಬೆಂಕಿಗೆ ಆಹುತಿಯಾಗುತ್ತಿತ್ತು.</p>.<p>'ಕೌಂಟರ್, ಫ್ರಿಜ್ ಎಲ್ಲಾ ಸಾಮಗ್ರಿ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿಯಾಗಿದೆ. ಎಲ್ಲಾ ಸುಟ್ಟು ಹೋಗಿದ್ದು, ಮತ್ತೆ ಮೊದಲಿನಿಂದ ಆರಂಭಿಸಬೇಕಾಗಿದೆ. ಇಲ್ಲಿನ ಗ್ರಾಮದೇವಿ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ' ಎಂದು ಅಂಗಡಿ ಮಾಲೀಕ ದೇವರಾಮ್ ರಾಥೋಡ್ ಕಣ್ಣೀರಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>