<p><strong>ಕಾರವಾರ</strong>:ಮುದಗಾ ಪುನರ್ವಸತಿ ಕೇಂದ್ರದಿಂದ ಹಾರ್ವಾಡ ಪುನರ್ವಸತಿ ಕೇಂದ್ರಕ್ಕೆ ಹೋಗುವ ರಸ್ತೆಗೆ ಇನ್ನೂ ಡಾಂಬರೀಕರಣವಾಗಿಲ್ಲ. ಅದನ್ನು ಅಭಿವೃದ್ಧಿಪಡಿಸಿ ಅನುಕೂಲ ಮಾಡಿಕೊಡುವಂತೆ ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.</p>.<p>ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಉಮಾಕಾಂತ ಹರಿಕಂತ್ರ, ‘ಈ ಹಿಂದೆ ಸೀಬರ್ಡ್ ನಿರಾಶ್ರಿತರನ್ನು ಒಕ್ಕಲೆಬ್ಬಿಸಿದ ನಂತರ ನಿರ್ಮಾಣ ಮಾಡಲಾದ ಬಂದರು ಮೀನುಗಾರರ ಜೀವನಾಡಿಯಾಗಿದೆ.ನಿರಾಶ್ರಿತರ ಕಾಲೊನಿಯಿಂದ ಈ ಬಂದರಿಗೆ ತೆರಳಲು ರಸ್ತೆಯೊಂದನ್ನೂನಿರ್ಮಿಸಲಾಗಿತ್ತು. ಆದರೆ, ಅದು ಇನ್ನೂ ಕಚ್ಚಾ ರಸ್ತೆಯಾಗಿಯೇ ಉಳಿದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>‘ರಸ್ತೆಯನ್ನು ಡಾಂಬರೀಕರಣ ಸೇರಿದಂತೆ ಪೂರಕ ಅಭಿವೃದ್ಧಿ ಮಾಡಿಲಿಲ್ಲ. 2019ರ ಸೆಪ್ಟಂಬರ್ನಲ್ಲಿಅತಿವೃಷ್ಟಿಯಿಂದ ಸಮುದ್ರದ ಅಬ್ಬರಕ್ಕೆ ಈ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಯಿತು. ಇದರಿಂದ ಸೀಬರ್ಡ್ ಕಾಲೊನಿಯಿಂದ ಬಂದರಿಗೆ ತೆರಳಲು ಮೀನುಗಾರರು ಪರ್ಯಾಯ ರಸ್ತೆ ಬಳಸುವಂತಾಗಿದೆ. ಈ ರಸ್ತೆ ಮೀನುಗಾರರಿಗೆ ತೀರಾಉಪಯುಕ್ತವಾಗಿತ್ತು. ಇಲ್ಲಿ ಬಸ್ ಸಂಚಾರ ಆರಂಭಿಸಲೂ ಯೋಚಿಸಲಾಗಿತ್ತು’ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.</p>.<p>ಇಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಪ್ರಕೃತಿ ವಿಕೋಪ ಪರಿಹಾರದಡಿ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು. ಇಲ್ಲಿ ಕುಸಿದಿರುವ ಕಿರು ಸೇತುವೆಯ ಜಾಗದಲ್ಲಿ ಭದ್ರವಾದ ಸೇತುವೆ ನಿರ್ಮಿಸಿದರೆ ದೀರ್ಘ ಕಾಲದ ಉಪಯೋಗವಾಗಲಿದೆ ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>:ಮುದಗಾ ಪುನರ್ವಸತಿ ಕೇಂದ್ರದಿಂದ ಹಾರ್ವಾಡ ಪುನರ್ವಸತಿ ಕೇಂದ್ರಕ್ಕೆ ಹೋಗುವ ರಸ್ತೆಗೆ ಇನ್ನೂ ಡಾಂಬರೀಕರಣವಾಗಿಲ್ಲ. ಅದನ್ನು ಅಭಿವೃದ್ಧಿಪಡಿಸಿ ಅನುಕೂಲ ಮಾಡಿಕೊಡುವಂತೆ ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.</p>.<p>ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಉಮಾಕಾಂತ ಹರಿಕಂತ್ರ, ‘ಈ ಹಿಂದೆ ಸೀಬರ್ಡ್ ನಿರಾಶ್ರಿತರನ್ನು ಒಕ್ಕಲೆಬ್ಬಿಸಿದ ನಂತರ ನಿರ್ಮಾಣ ಮಾಡಲಾದ ಬಂದರು ಮೀನುಗಾರರ ಜೀವನಾಡಿಯಾಗಿದೆ.ನಿರಾಶ್ರಿತರ ಕಾಲೊನಿಯಿಂದ ಈ ಬಂದರಿಗೆ ತೆರಳಲು ರಸ್ತೆಯೊಂದನ್ನೂನಿರ್ಮಿಸಲಾಗಿತ್ತು. ಆದರೆ, ಅದು ಇನ್ನೂ ಕಚ್ಚಾ ರಸ್ತೆಯಾಗಿಯೇ ಉಳಿದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>‘ರಸ್ತೆಯನ್ನು ಡಾಂಬರೀಕರಣ ಸೇರಿದಂತೆ ಪೂರಕ ಅಭಿವೃದ್ಧಿ ಮಾಡಿಲಿಲ್ಲ. 2019ರ ಸೆಪ್ಟಂಬರ್ನಲ್ಲಿಅತಿವೃಷ್ಟಿಯಿಂದ ಸಮುದ್ರದ ಅಬ್ಬರಕ್ಕೆ ಈ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಯಿತು. ಇದರಿಂದ ಸೀಬರ್ಡ್ ಕಾಲೊನಿಯಿಂದ ಬಂದರಿಗೆ ತೆರಳಲು ಮೀನುಗಾರರು ಪರ್ಯಾಯ ರಸ್ತೆ ಬಳಸುವಂತಾಗಿದೆ. ಈ ರಸ್ತೆ ಮೀನುಗಾರರಿಗೆ ತೀರಾಉಪಯುಕ್ತವಾಗಿತ್ತು. ಇಲ್ಲಿ ಬಸ್ ಸಂಚಾರ ಆರಂಭಿಸಲೂ ಯೋಚಿಸಲಾಗಿತ್ತು’ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.</p>.<p>ಇಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಪ್ರಕೃತಿ ವಿಕೋಪ ಪರಿಹಾರದಡಿ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು. ಇಲ್ಲಿ ಕುಸಿದಿರುವ ಕಿರು ಸೇತುವೆಯ ಜಾಗದಲ್ಲಿ ಭದ್ರವಾದ ಸೇತುವೆ ನಿರ್ಮಿಸಿದರೆ ದೀರ್ಘ ಕಾಲದ ಉಪಯೋಗವಾಗಲಿದೆ ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>