ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಉಮಾಕಾಂತ ಹರಿಕಂತ್ರ, ‘ಈ ಹಿಂದೆ ಸೀಬರ್ಡ್ ನಿರಾಶ್ರಿತರನ್ನು ಒಕ್ಕಲೆಬ್ಬಿಸಿದ ನಂತರ ನಿರ್ಮಾಣ ಮಾಡಲಾದ ಬಂದರು ಮೀನುಗಾರರ ಜೀವನಾಡಿಯಾಗಿದೆ.ನಿರಾಶ್ರಿತರ ಕಾಲೊನಿಯಿಂದ ಈ ಬಂದರಿಗೆ ತೆರಳಲು ರಸ್ತೆಯೊಂದನ್ನೂನಿರ್ಮಿಸಲಾಗಿತ್ತು. ಆದರೆ, ಅದು ಇನ್ನೂ ಕಚ್ಚಾ ರಸ್ತೆಯಾಗಿಯೇ ಉಳಿದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.