ಗ್ರಾಮದ ರಮೇಶ ಎಂಬುವವರು ಆಕ್ರೋಶಭರಿತರಾಗಿ, ‘ನಾವು 30 ವರ್ಷಗಳಿಂದ ಇಲ್ಲಿವಾಸಿಸುತ್ತಿದ್ದೇವೆ. ಇಂತಹ ಸನ್ನಿವೇಶವನ್ನುಎಂದೂ ಕಂಡಿರಲಿಲ್ಲ. ಮಕ್ಕಳು, ವೃದ್ಧರನ್ನು ಕರೆದುಕೊಂಡು ಓಡೋಡಿ ಬಂದಿದ್ದೇವೆ. ಅಧಿಕಾರಿಗಳೇನೋ ಏನೂ ಆಗಲ್ಲ ಎಂದು ಹೇಳುತ್ತಾರೆ. ನಾವು ಬಡವರು, ಏನಾದರೂ ಆದರೆ ಎಲ್ಲಿಗೆ ಹೋಗಬೇಕು’ ಎಂದು ಸುದ್ದಿಗಾರರನ್ನು ಕೇಳುತ್ತ,ಮಳೆಯಲ್ಲಿ ಸಂಪೂರ್ಣವಾಗಿ ತೊಯ್ದಿದ್ದ ತಮ್ಮ ಜೊತೆಗಿದ್ದ ಮೂರು ವರ್ಷದ ಬಾಲಕನ ತಲೆಯೊರೆಸಿದರು.