<p><strong>ಶಿರಸಿ: </strong>ತಾಲ್ಲೂಕಿನ ಸಂಕದಮನೆಯ ಹೈನುಗಾರರೊಬ್ಬರ ಮನೆಯ ಆಕಳು ಒಂದು ತಿಂಗಳ ಹಿಂದೆ ನುಂಗಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನು ಮಂಗಳವಾರ ಸಂಜೆ ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ ತೆಗೆಯಲಾಗಿದೆ.</p>.<p>ಶ್ರೀಕಾಂತ ಹೆಗಡೆ ಎಂಬುವವರಿಗೆ ಸೇರಿದ ಆಕಳು ಇದಾಗಿದ್ದು, ನ.5 ರಂದು ದೀಪಾವಳಿ ಅಂಗವಾಗಿ ಗೋಪೂಜೆ ಸಲ್ಲಿಸಲು ಬಂಗಾರದ ಸರವನ್ನು ಆಕಳ ಎದುರು ಇಟ್ಟಿದ್ದರು. ಈ ವೇಳೆ ಸರ ಕಾಣೆಯಾಗಿತ್ತು. ಸರಕ್ಕಾಗಿ ಹುಡುಕಾಟ ನಡೆಸಿದ ಮನೆಯವರು ನಂತರ ಆಕಳು ನುಂಗಿರಬಹುದು ಎಂದು ಶಂಕಿಸಿದ್ದರು.</p>.<p>ಘಟನೆ ನಡೆದ ತಿಂಗಳ ಬಳಿಕ ಪಶುವೈದ್ಯರಿಗೆ ವಿಷಯ ತಿಳಿಸಲಾಗಿತ್ತು. ಆಕಳ ಹೊಟ್ಟೆಯನ್ನು ಲೋಹಪರಿಶೋಧಕದ ಮೂಲಕ ಪರಿಶೀಲಿಸಿದ್ದ ಡಾ.ಪಿ.ಎಸ್.ಹೆಗಡೆ ಸರ ನುಂಗಿರುವುದನ್ನು ದೃಢಪಡಿಸಿಕೊಂಡಿದ್ದರು. ಮಂಗಳವಾರ ಸಂಜೆ ಉಮ್ಮಚಗಿಯ ಪಶುವೈದ್ಯ ಡಾ.ರಾಜೇಶ್ ಜತೆಗೂಡಿ ಶಸ್ತ್ರಚಿಕಿತ್ಸೆ ನಡೆಸಿ ಸರ ಹೊರಕ್ಕೆ ತೆದಿದ್ದಾರೆ.</p>.<p>‘ಆಕಳ ಹೊಟ್ಟೆಯ ಒಳಭಾಗದಲ್ಲಿ ಜೇನುಗೂಡಿನಂತ ರಚನೆ ಇರುವ ಜಾಗದಲ್ಲಿ ಸರ ಸಿಲುಕೊಂಡಿತ್ತು. ಅದನ್ನು ಹೊರಕ್ಕೆ ತೆಗೆಯಲಾಗಿದ್ದು ಆಕಳ ಆರೋಗ್ಯ ಸುಧರಣೆಯಾಗುತ್ತದೆ. ಹೈನುಗಾರರು ಇಂತಹ ವಸ್ತುವನ್ನು ಆಕಳ ಸಮೀಪ ಇಡದಂತೆ ಎಚ್ಚರವಹಿಸಬೇಕು’ ಎಂದು ಡಾ.ಪಿ.ಎಸ್.ಹೆಗಡೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ತಾಲ್ಲೂಕಿನ ಸಂಕದಮನೆಯ ಹೈನುಗಾರರೊಬ್ಬರ ಮನೆಯ ಆಕಳು ಒಂದು ತಿಂಗಳ ಹಿಂದೆ ನುಂಗಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನು ಮಂಗಳವಾರ ಸಂಜೆ ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ ತೆಗೆಯಲಾಗಿದೆ.</p>.<p>ಶ್ರೀಕಾಂತ ಹೆಗಡೆ ಎಂಬುವವರಿಗೆ ಸೇರಿದ ಆಕಳು ಇದಾಗಿದ್ದು, ನ.5 ರಂದು ದೀಪಾವಳಿ ಅಂಗವಾಗಿ ಗೋಪೂಜೆ ಸಲ್ಲಿಸಲು ಬಂಗಾರದ ಸರವನ್ನು ಆಕಳ ಎದುರು ಇಟ್ಟಿದ್ದರು. ಈ ವೇಳೆ ಸರ ಕಾಣೆಯಾಗಿತ್ತು. ಸರಕ್ಕಾಗಿ ಹುಡುಕಾಟ ನಡೆಸಿದ ಮನೆಯವರು ನಂತರ ಆಕಳು ನುಂಗಿರಬಹುದು ಎಂದು ಶಂಕಿಸಿದ್ದರು.</p>.<p>ಘಟನೆ ನಡೆದ ತಿಂಗಳ ಬಳಿಕ ಪಶುವೈದ್ಯರಿಗೆ ವಿಷಯ ತಿಳಿಸಲಾಗಿತ್ತು. ಆಕಳ ಹೊಟ್ಟೆಯನ್ನು ಲೋಹಪರಿಶೋಧಕದ ಮೂಲಕ ಪರಿಶೀಲಿಸಿದ್ದ ಡಾ.ಪಿ.ಎಸ್.ಹೆಗಡೆ ಸರ ನುಂಗಿರುವುದನ್ನು ದೃಢಪಡಿಸಿಕೊಂಡಿದ್ದರು. ಮಂಗಳವಾರ ಸಂಜೆ ಉಮ್ಮಚಗಿಯ ಪಶುವೈದ್ಯ ಡಾ.ರಾಜೇಶ್ ಜತೆಗೂಡಿ ಶಸ್ತ್ರಚಿಕಿತ್ಸೆ ನಡೆಸಿ ಸರ ಹೊರಕ್ಕೆ ತೆದಿದ್ದಾರೆ.</p>.<p>‘ಆಕಳ ಹೊಟ್ಟೆಯ ಒಳಭಾಗದಲ್ಲಿ ಜೇನುಗೂಡಿನಂತ ರಚನೆ ಇರುವ ಜಾಗದಲ್ಲಿ ಸರ ಸಿಲುಕೊಂಡಿತ್ತು. ಅದನ್ನು ಹೊರಕ್ಕೆ ತೆಗೆಯಲಾಗಿದ್ದು ಆಕಳ ಆರೋಗ್ಯ ಸುಧರಣೆಯಾಗುತ್ತದೆ. ಹೈನುಗಾರರು ಇಂತಹ ವಸ್ತುವನ್ನು ಆಕಳ ಸಮೀಪ ಇಡದಂತೆ ಎಚ್ಚರವಹಿಸಬೇಕು’ ಎಂದು ಡಾ.ಪಿ.ಎಸ್.ಹೆಗಡೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>