ಇದೇ ತಿಂಗಳು ಹೆಚ್ಚು ಮಳೆ ಸುರಿದ ಕಾರಣಕ್ಕೆ, ಜೊತೆಗೆ ವಾರಗಳ ಕಾಲ ವೇಗದ ಗಾಳಿಯೂ ಬೀಸಿದ್ದ ಪರಿಣಾಮ ಅನೇಕ ಕಡೆ ಕಂಬಗಳು ಮುರಿದು ಬಿದ್ದಿದ್ದವು. ಮಲೆನಾಡು ಪ್ರದೇಶವಾದ ಶಿರಸಿ, ಯಲ್ಲಾಪುರ, ಸಿದ್ದಾಪುರ ಮತ್ತು ಅಂಕೋಲಾದ ಕೆಲವು ಗ್ರಾಮಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.