ತಾಲ್ಲೂಕಿನ ಬನವಾಸಿಯ ಮಾರುತಿ ದೇವಸ್ಥಾನದ ನೂತನ ಕಳಸದ ಮೆರವಣಿಗೆ, ಮಧುಕೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿ ಉತ್ಸವ ಸಂಭ್ರಮದಿಂದ ನೆರವೇರಿತು. ಗುಡ್ನಾಪುರ ಬಂಗಾರೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು. ಭಕ್ತರು ಗುಡ್ನಾಪುರ ಕೆರೆಯಲ್ಲಿ ಪುಣ್ಯ ಸ್ನಾನ ಮಾಡಿದರು. ಶೀಗೇಹಳ್ಳಿಯ ಚನ್ನಕೇಶವ ದೇವಾಲಯದಲ್ಲಿ ಸಂಕ್ರಮಣದ ನಿಮಿತ್ತ 10ಸಾವಿರ ತುಳಸಿ ಅರ್ಚನೆ, ಪುರುಷಸೂಕ್ತ ಹವನ, ಕುಂಕುಮಾರ್ಚನೆ, ಸತ್ಯನಾರಾಯಣ ಪೂಜೆ, ಅಷ್ಟಾಂಗ ಸೇವೆ, ಪಲ್ಲಕ್ಕಿ ಉತ್ಸವ ಶ್ರದ್ಧಾಭಕ್ತಿಯ ನಡುವೆ ನಡೆಯಿತು.