ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಿಂದ ರಾಮತೀರ್ಥ, ಕೋಟಿತೀರ್ಥದ ತೀರ್ಥವನ್ನು ಈಗಾಗಲೇ ಕಳುಹಿಸಲಾಗಿದೆ. ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿ ಮಠ, ಸೋದೆ ವಾದಿರಾಜ ಮಠ, ಸ್ವಾದಿ ದಿಗಂಬರ ಜೈನಮಠಗಳಿಂದ ಮೃತ್ತಿಕೆ, ಶಾಲ್ಮಲಾ ನದಿಯ ತೀರ್ಥ, ಬನವಾಸಿ ಮಧುಕೇಶ್ವರ ದೇವಾಲಯದಿಂದ ವರದಾ ನದಿ ತೀರ್ಥ, ಮೃತ್ತಿಕೆ, ಮಾರಿಕಾಂಬಾ ದೇವಾಲಯದಿಂದ ಮೃತ್ತಿಕೆಯನ್ನು ಸಂಗ್ರಹಿಸಲಾಗಿದೆ. ಇದನ್ನು ಕೋರಿಯರ್ ಮೂಲಕ ಅಯೋಧ್ಯೆಗೆ ತಲುಪಿಸಲಾಗುತ್ತದೆ’ ಎಂದರು.