<p><strong>ಗೋಕರ್ಣ:</strong>ಸಾಲುಸಾಲು ರಜಾದಿನಗಳು ಬಂದ ಕಾರಣ ಇಲ್ಲಿನ ಕಡಲತೀರದ ಬಹುತೇಕ ವಸತಿಗೃಹಗಳು ಪ್ರವಾಸಿಗರಿಂದ ಭರ್ತಿಯಾಗಿವೆ. ಅವುಗಳಲ್ಲಿ ಮೊದಲ ಹಂತದ ಚುನಾವಣೆ ನಡೆದ ಬೆಂಗಳೂರಿನ ನೋಂದಣಿ ಸಂಖ್ಯೆಯುಳ್ಳ ನೂರಾರು ವಾಹನಗಳಲ್ಲಿ ಬಂದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ.</p>.<p>ಮತದಾನದ ಸಲುವಾಗಿ ಗುರುವಾರ ಸಾರ್ವತ್ರಿಕ ರಜೆ, ಶುಕ್ರವಾರ ಗುಡ್ಫ್ರೈಡೇ, ಶನಿವಾರ ಹಾಗೂ ಭಾನುವಾರ ಸೇರಿ ನಾಲ್ಕು ರಜಾದಿನಗಳಿವೆ. ಹೀಗಾಗಿ ಇಲ್ಲಿನ ಕಡಲತೀರಗಳಿಗೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ.</p>.<p>‘ಪ್ರವಾಸಿಗರಲ್ಲಿ ಬಹುತೇಕರು ಗುರುವಾರವೇ ತಲುಪಿದ್ದಾರೆ. ಅವರೆಲ್ಲ ಮತದಾನ ಮಾಡಿರುವ ಬಗ್ಗೆ ಅನುಮಾನವಿದೆ.ಮತದಾನ ಜಾಗೃತಿಗೆಚುನಾವಣಾ ಆಯೋಗ ಎಷ್ಟೇ ಪ್ರಯತ್ನ ಪಟ್ಟರೂ ಮತದಾರರಿಂದ ಸಹಕಾರವಿಲ್ಲದಿದ್ದರೆ ಏನು ಪ್ರಯೋಜನ’ ಎಂಬುದು ಸ್ಥಳೀಯರಾದ ರಾಮನಾಥ ಅವರ ಪ್ರಶ್ನೆಯಾಗಿದೆ.</p>.<p>ಕುಡ್ಲೆ ಕಡಲತೀರದಲ್ಲಿ ಮಾತಿಗೆ ಸಿಕ್ಕ ಪ್ರವಾಸಿ ಯುವಕ, ಬೆಂಗಳೂರಿನ ಸಾಫ್ಟ್ವೇರ್ ಸಂಸ್ಥೆಯೊಂದರ ಉದ್ಯೋಗಿ ರಮೇಶ್, ‘ನಾನು ಮೂಲತಃ ಬೆಳಗಾವಿಯವನು. ಉತ್ತರ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನವಿದೆ. ಸಾಲುಸಾಲು ರಜಾದಿನಗಳಿರುವ ಕಾರಣಗೆಳೆಯರ ಜೊತೆ ಪ್ರವಾಸ ಬಂದಿದ್ದೇನೆ’ ಎಂದರು.</p>.<p>ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದ ಮತ್ತೊಬ್ಬ ಪ್ರವಾಸಿ, ‘ನನ್ನ ವೋಟುಬೆಂಗಳೂರಿನಿಂದಹೊರಗಿದೆ. ಒಂದುಮತ ಹಾಕಲು ನೂರಾರು ಕಿಲೋಮೀಟರ್ ದೂರ ಹೋಗುವ ಬದಲು ಸ್ನೇಹಿತರ ಜೊತೆ ಮೊದಲ ಸಲ ಗೋಕರ್ಣಕ್ಕೆ ಬಂದಿದ್ದೇನೆ’ ಎಂದು ಹೇಳಿದರು. ಆದರೆ, ತಮ್ಮ ಹೆಸರು, ಊರು ತಿಳಿಸಲು ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ:</strong>ಸಾಲುಸಾಲು ರಜಾದಿನಗಳು ಬಂದ ಕಾರಣ ಇಲ್ಲಿನ ಕಡಲತೀರದ ಬಹುತೇಕ ವಸತಿಗೃಹಗಳು ಪ್ರವಾಸಿಗರಿಂದ ಭರ್ತಿಯಾಗಿವೆ. ಅವುಗಳಲ್ಲಿ ಮೊದಲ ಹಂತದ ಚುನಾವಣೆ ನಡೆದ ಬೆಂಗಳೂರಿನ ನೋಂದಣಿ ಸಂಖ್ಯೆಯುಳ್ಳ ನೂರಾರು ವಾಹನಗಳಲ್ಲಿ ಬಂದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ.</p>.<p>ಮತದಾನದ ಸಲುವಾಗಿ ಗುರುವಾರ ಸಾರ್ವತ್ರಿಕ ರಜೆ, ಶುಕ್ರವಾರ ಗುಡ್ಫ್ರೈಡೇ, ಶನಿವಾರ ಹಾಗೂ ಭಾನುವಾರ ಸೇರಿ ನಾಲ್ಕು ರಜಾದಿನಗಳಿವೆ. ಹೀಗಾಗಿ ಇಲ್ಲಿನ ಕಡಲತೀರಗಳಿಗೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ.</p>.<p>‘ಪ್ರವಾಸಿಗರಲ್ಲಿ ಬಹುತೇಕರು ಗುರುವಾರವೇ ತಲುಪಿದ್ದಾರೆ. ಅವರೆಲ್ಲ ಮತದಾನ ಮಾಡಿರುವ ಬಗ್ಗೆ ಅನುಮಾನವಿದೆ.ಮತದಾನ ಜಾಗೃತಿಗೆಚುನಾವಣಾ ಆಯೋಗ ಎಷ್ಟೇ ಪ್ರಯತ್ನ ಪಟ್ಟರೂ ಮತದಾರರಿಂದ ಸಹಕಾರವಿಲ್ಲದಿದ್ದರೆ ಏನು ಪ್ರಯೋಜನ’ ಎಂಬುದು ಸ್ಥಳೀಯರಾದ ರಾಮನಾಥ ಅವರ ಪ್ರಶ್ನೆಯಾಗಿದೆ.</p>.<p>ಕುಡ್ಲೆ ಕಡಲತೀರದಲ್ಲಿ ಮಾತಿಗೆ ಸಿಕ್ಕ ಪ್ರವಾಸಿ ಯುವಕ, ಬೆಂಗಳೂರಿನ ಸಾಫ್ಟ್ವೇರ್ ಸಂಸ್ಥೆಯೊಂದರ ಉದ್ಯೋಗಿ ರಮೇಶ್, ‘ನಾನು ಮೂಲತಃ ಬೆಳಗಾವಿಯವನು. ಉತ್ತರ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನವಿದೆ. ಸಾಲುಸಾಲು ರಜಾದಿನಗಳಿರುವ ಕಾರಣಗೆಳೆಯರ ಜೊತೆ ಪ್ರವಾಸ ಬಂದಿದ್ದೇನೆ’ ಎಂದರು.</p>.<p>ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದ ಮತ್ತೊಬ್ಬ ಪ್ರವಾಸಿ, ‘ನನ್ನ ವೋಟುಬೆಂಗಳೂರಿನಿಂದಹೊರಗಿದೆ. ಒಂದುಮತ ಹಾಕಲು ನೂರಾರು ಕಿಲೋಮೀಟರ್ ದೂರ ಹೋಗುವ ಬದಲು ಸ್ನೇಹಿತರ ಜೊತೆ ಮೊದಲ ಸಲ ಗೋಕರ್ಣಕ್ಕೆ ಬಂದಿದ್ದೇನೆ’ ಎಂದು ಹೇಳಿದರು. ಆದರೆ, ತಮ್ಮ ಹೆಸರು, ಊರು ತಿಳಿಸಲು ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>