‘ವಾರದ ಏಳು ದಿನವೂ ಮಂಡಿಯಲ್ಲಿ ಬಾಳೆಕಾಯಿ ಖರೀದಿ ನಡೆಯುತ್ತದೆ. ರೈತರು ಭಾನುವಾರದ ಮಾರ್ಕೆಟ್ಗೆ ಕಾಯಬೇಕಾಗಿಲ್ಲ. ಅಲ್ಲದೇ, ಮಾರುಕಟ್ಟೆಯಲ್ಲಿರುವ ದರದಲ್ಲಿಯೇ ರೈತರಿಂದ ಖರೀದಿಸುವುದರಿಂದ ಅವರಿಗೆ ಅನುಕೂಲವಾಗಿದೆ. ನೆರೆಯ ಜಿಲ್ಲೆಯ ಅಕ್ಕಿಆಲೂರು, ತಿಳವಳ್ಳಿ, ದಾಸನಕೊಪ್ಪ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳ ರೈತರಿಂದ ಮಿಟ್ಲಿ, ಕರಿಬಾಳೆ, ಸುಗಂಧಿ (ಹುಳಿ ಮಿಟ್ಲಿ), ಪಚಬಾಳೆ ಸೇರಿ ದಿನಕ್ಕೆ ಸರಾಸರಿ 2–3 ಟನ್ ಬಾಳೆಕಾಯಿ ಖರೀದಿಸುತ್ತೇನೆ’ ಎನ್ನುತ್ತಾರೆ ಅವರು.