ಅವರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮೀನುಗಾರ ಮುಖಂಡರು ಹೋರಾಟಕ್ಕಾಗಲೀ ಬಂದ್ಗಾಗಲೀ ನನಗೆ ಆಮಂತ್ರಣ ನೀಡಿರಲಿಲ್ಲ. ಆದರೆ, ನಾನು ಕಡಲತೀರದ ರಕ್ಷಣೆ ಹಾಗೂ ಮೀನುಗಾರರ ಹಿತಾಸಕ್ತಿಗಾಗಿ ಹೋರಾಟದಲ್ಲಿ ಸ್ವತಃ ಭಾಗಿಯಾಗಿದ್ದೇನೆ. ರಾಜಕೀಯ ಸ್ವಾರ್ಥವೆಂದು ದೂರುವ ಶಾಸಕಿ ರೂಪಾಲಿ ಅವರು ಇದನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.