ಗೋಕರ್ಣದ ಅಶೋಕೆಯಲ್ಲಿ ಮಂಗಳವಾರ, ತಮ್ಮ 29ನೇ ಸನ್ಯಾಸ ಸ್ವೀಕಾರ ದಿನದಂದು ನಡೆದ ಕಾರ್ಯಕ್ರಮದಲ್ಲಿ, ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ಅವರು ಅಭಯ ನೀಡಿದರು. ಅವರ ಜೀವನಕ್ಕೆ ನೆರವಾಗುವ ‘ಜೀವನದಾನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹೊನ್ನಾವರ ತಾಲ್ಲೂಕಿನ ಯಶೋಧಾ ಹೆಗಡೆ ಅವರಿಗೆ ‘ಜೀವನದಾನ’ ಪ್ರದಾನ ಮಾಡಲಾಯಿತು.