‘ಸಮುದ್ರದಿಂದ ಮೀನು ಹಿಡಿದು ತಂದು ಅದನ್ನು ಮಾರಾಟ ಮಾಡಲು ಕಷ್ಟವೆಷ್ಟಿದೆ ಎಂದು ಗೊತ್ತಿದ್ದವರು ಈ ರೀತಿ ನೆಲಕ್ಕೆ ಎಸೆದು ಹಾಳು ಮಾಡುತ್ತಿರಲಿಲ್ಲ. ಮನೆ ಮನೆಗೆ ಹೋಗಿ ಮಾರಾಟ ಮಾಡಿ ಎಂದು ಹೇಳುತ್ತಾರೆ. ಆದರೆ, ಮನೆಯವರು ಸರಿಯಾಗಿ ಸ್ಪಂದಿಸುವುದಿಲ್ಲ. ಕೊರೊನಾದ ನೆಪದಲ್ಲಿ ಕೆಲವರು ಹತ್ತಿರ ಬರುವುದಿರಲಿ, ಗೇಟು ಕೂಡ ತೆರೆಯುವುದಿಲ್ಲ’ ಎಂದು ಅಳಲು ತೋಡಿಕೊಂಡರು.