ಬಿಜೆಪಿ ಮೋಸ ಮಾಡಿತು:‘ಹಿಂದೆ35 ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಬಿಜೆಪಿಗೆ ಅಭ್ಯರ್ಥಿ ಇಲ್ಲದ ಸಮಯದಲ್ಲಿ ಆ ಪಕ್ಷದ ಮುಖಂಡರು ನನ್ನ ಮನೆ ಬಾಗಿಲಿಗೆ ಬಂದು ಕೇಳಿಕೊಂಡರು, ಒತ್ತಾಯ ಮಾಡಿ ‘ಬಿ’ ಫಾರ್ಮ್ ಕೊಟ್ಟರು. ಆದರೆ, ಎರಡನೇ ಬಾರಿ ಗೆಲ್ಲುವ ಅವಕಾಶ ಇದ್ದ ಸಂದರ್ಭದಲ್ಲಿ ಮೋಸ ಮಾಡಿದರು’ ಎಂದು ಆರೋಪಿಸಿದರು. ‘ಜಿಲ್ಲೆಯ ಶಿಕ್ಷಕರು, ಪದವೀಧರರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಈಗಿನ ಎಂಎಲ್ಸಿ ಆದವರು ಕಳೆದ ಐದು ವರ್ಷದಲ್ಲಿ ಎಷ್ಟು ಕಾರ್ಯ ಮಾಡಿದ್ದಾರೆ ಎಂದು ಹೇಳಲಿ, ಬಹಿರಂಗ ಸಂವಾದ ಏರ್ಪಡಿಸಲಿಎಂದು ಸವಾಲು ಹಾಕಿದರು. ಕಾಂಗ್ರೆಸ್ ಮುಖಂಡರಾದ ಎಸ್.ಕೆ.ಭಾಗ್ವತ್, ಪ್ರಭಾಕರ ಮಾಳ್ಸೇಕರ್, ಅಶ್ವಥ್, ನಿತಿನ್ ಇದ್ದರು.