<p><strong>ಕಾರವಾರ: </strong>ರಾಷ್ಟ್ರೀಯ ಹೆದ್ದಾರಿಯನ್ನಾಗಿ (ಸಂಖ್ಯೆ 766 ಇಇ) ಮೇಲ್ದರ್ಜೆಗೇರಿಸುವ ಕಾಮಗಾರಿ ಸಲುವಾಗಿಶಿರಸಿ– ಕುಮಟಾ ರಸ್ತೆಯಲ್ಲಿ ಅ.12ರಿಂದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. 18 ತಿಂಗಳ ಅವಧಿಗೆ ಇದು ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ.</p>.<p class="Subhead"><strong>ಪರ್ಯಾಯ ರಸ್ತೆಗಳು:</strong>ಕರಾವಳಿ ಮತ್ತು ಹುಬ್ಬಳ್ಳಿ, ಹಾವೇರಿ ಭಾಗಕ್ಕೆ ಸಂಪರ್ಕ ಕೊಂಡಿಯಾಗಿದ್ದ ಈ ರಸ್ತೆಗೆ ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದೆ.</p>.<p>ಕುಮಟಾದಿಂದ ಸಿದ್ದಾಪುರದ ಮೂಲಕ ಸಾಗಿ ಶಿರಸಿಗೆ ತಲುಪುವುದು (ಲಘು ವಾಹನಗಳು ಮಾತ್ರ), ಅಂಕೋಲಾದಿಂದ ಯಲ್ಲಾಪುರಕ್ಕೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಾಗಿ ರಾಜ್ಯ ಹೆದ್ದಾರಿ 93ರಲ್ಲಿ ಶಿರಸಿಗೆ ಹೋಗುವುದು. ಹೊನ್ನಾವರದಿಂದ ಮಾವಿನಗುಂಡಿ ಮೂಲಕ ಸಾಗಿ ಸಿದ್ದಾಪುರಕ್ಕೆ ಹೋಗಿ ಶಿರಸಿಗೆ ತಲುಪಬಹುದು. ಈ ರಸ್ತೆಗಳಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.</p>.<p>ಮೇಲ್ದರ್ಜೆಗೇರಲಿರುವ ರಸ್ತೆಯಲ್ಲಿ ಕುಮಟಾದಿಂದ ಶಿರಸಿಗೆ 60 ಕಿಲೋಮೀಟರ್ ದೂರವಾಗುತ್ತಿತ್ತು. ಈಗ ಸಿದ್ದಾಪುರದ ಮೂಲಕ ಸಾಗಿದರೆ ಸುಮಾರು 90 ಕಿಲೋಮೀಟರ್, ಹೊನ್ನಾವರದ ಮೂಲಕ ಸಾಗಿದರೆ 125 ಕಿಲೋಮೀಟರ್, ಯಲ್ಲಾಪುರದ ಮೂಲಕ ಸಾಗಿದರೆ ಸುಮಾರು 155 ಕಿಲೋಮೀಟರ್ ದೂರವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ರಾಷ್ಟ್ರೀಯ ಹೆದ್ದಾರಿಯನ್ನಾಗಿ (ಸಂಖ್ಯೆ 766 ಇಇ) ಮೇಲ್ದರ್ಜೆಗೇರಿಸುವ ಕಾಮಗಾರಿ ಸಲುವಾಗಿಶಿರಸಿ– ಕುಮಟಾ ರಸ್ತೆಯಲ್ಲಿ ಅ.12ರಿಂದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. 18 ತಿಂಗಳ ಅವಧಿಗೆ ಇದು ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ.</p>.<p class="Subhead"><strong>ಪರ್ಯಾಯ ರಸ್ತೆಗಳು:</strong>ಕರಾವಳಿ ಮತ್ತು ಹುಬ್ಬಳ್ಳಿ, ಹಾವೇರಿ ಭಾಗಕ್ಕೆ ಸಂಪರ್ಕ ಕೊಂಡಿಯಾಗಿದ್ದ ಈ ರಸ್ತೆಗೆ ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದೆ.</p>.<p>ಕುಮಟಾದಿಂದ ಸಿದ್ದಾಪುರದ ಮೂಲಕ ಸಾಗಿ ಶಿರಸಿಗೆ ತಲುಪುವುದು (ಲಘು ವಾಹನಗಳು ಮಾತ್ರ), ಅಂಕೋಲಾದಿಂದ ಯಲ್ಲಾಪುರಕ್ಕೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಾಗಿ ರಾಜ್ಯ ಹೆದ್ದಾರಿ 93ರಲ್ಲಿ ಶಿರಸಿಗೆ ಹೋಗುವುದು. ಹೊನ್ನಾವರದಿಂದ ಮಾವಿನಗುಂಡಿ ಮೂಲಕ ಸಾಗಿ ಸಿದ್ದಾಪುರಕ್ಕೆ ಹೋಗಿ ಶಿರಸಿಗೆ ತಲುಪಬಹುದು. ಈ ರಸ್ತೆಗಳಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.</p>.<p>ಮೇಲ್ದರ್ಜೆಗೇರಲಿರುವ ರಸ್ತೆಯಲ್ಲಿ ಕುಮಟಾದಿಂದ ಶಿರಸಿಗೆ 60 ಕಿಲೋಮೀಟರ್ ದೂರವಾಗುತ್ತಿತ್ತು. ಈಗ ಸಿದ್ದಾಪುರದ ಮೂಲಕ ಸಾಗಿದರೆ ಸುಮಾರು 90 ಕಿಲೋಮೀಟರ್, ಹೊನ್ನಾವರದ ಮೂಲಕ ಸಾಗಿದರೆ 125 ಕಿಲೋಮೀಟರ್, ಯಲ್ಲಾಪುರದ ಮೂಲಕ ಸಾಗಿದರೆ ಸುಮಾರು 155 ಕಿಲೋಮೀಟರ್ ದೂರವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>