<p><strong>ಶಿರಸಿ:</strong> ತಾಲ್ಲೂಕಿನ ಚಿಪಗಿಯಲ್ಲಿ ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಶುಕ್ರವಾರ ಜೀವಂತ ನಾಗರಹಾವಿಗೆ ಪೂಜೆ ಮಾಡಿ ನಾಗರ ಪಂಚಮಿ ಆಚರಿಸಿದರು.</p>.<p>ಕಳೆದ ಹದಿಮೂರು ವರ್ಷಗಳಿಂದ ಹಬ್ಬದ ದಿನ ಅವರು ನೈಜ ನಾಗರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಗುರುವಾರ ಸೆರೆಹಿಡಿದಿದ್ದ ಹಾವಿಗೆ ಮನೆಯ ಆವರಣದಲ್ಲಿ ಪೂಜೆ ಸಲ್ಲಿಸಿದರು.</p>.<p>ನೆರೆಹೊರೆಯ ಹತ್ತಾರು ಜನರೂ ಪೂಜೆಯಲ್ಲಿ ಭಾಗಿಯಾದರು. ಚಿಕ್ಕ ಮಕ್ಕಳು, ಮಹಿಳೆಯರು ಭಯವಿಲ್ಲದೆ ಹಾವಿಗೆ ಪೂಜೆ ಸಲ್ಲಿಸಿದರು.</p>.<p>'ಹಾವಿನ ಕುರಿತ ಭಯ, ಮೂಢನಂಬಿಕೆ ಹೋಗಲಾಡಿಸುವ ಉದ್ದೇಶದಿಂದ ಪ್ರತಿ ನಾಗರ ಪಂಚಮಿ ದಿನ ಜೀವಂತ ಹಾವಿಗೆ ಪೂಜೆ ಸಲ್ಲಿಸುತ್ತಿದ್ದೇನೆ. ಹಾವು ಕೇವಲ ನೀರು ಕುಡಿಯುತ್ತವೆ, ಹಾಲು ಕುಡಿಯುವುದಿಲ್ಲ ಎಂಬುದನ್ನೂ ಪೂಜೆ ವೇಳೆ ಜನರಿಗೆ ಮನವರಿಕೆ ಮಾಡಿಕೊಡುತ್ತೇನೆ' ಎಂದು ಪ್ರಶಾಂತ್ ಹೇಳಿದರು.</p>.<p>ತಾಲ್ಲೂಕಿನ ವಿವಿಧೆಡೆ ನಾಗರ ಕಟ್ಟೆಗೆ ಭಕ್ತರು ಪೂಜೆ ಸಲ್ಲಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ನೀಲೆಕಣಿಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ದೇವಾಲಯದ ಹೊರಗಿರುವ ನಾಗರ ಕಲ್ಲಿಗೆ ನೂರಾರು ಜನರು ಪೂಜೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ತಾಲ್ಲೂಕಿನ ಚಿಪಗಿಯಲ್ಲಿ ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಶುಕ್ರವಾರ ಜೀವಂತ ನಾಗರಹಾವಿಗೆ ಪೂಜೆ ಮಾಡಿ ನಾಗರ ಪಂಚಮಿ ಆಚರಿಸಿದರು.</p>.<p>ಕಳೆದ ಹದಿಮೂರು ವರ್ಷಗಳಿಂದ ಹಬ್ಬದ ದಿನ ಅವರು ನೈಜ ನಾಗರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಗುರುವಾರ ಸೆರೆಹಿಡಿದಿದ್ದ ಹಾವಿಗೆ ಮನೆಯ ಆವರಣದಲ್ಲಿ ಪೂಜೆ ಸಲ್ಲಿಸಿದರು.</p>.<p>ನೆರೆಹೊರೆಯ ಹತ್ತಾರು ಜನರೂ ಪೂಜೆಯಲ್ಲಿ ಭಾಗಿಯಾದರು. ಚಿಕ್ಕ ಮಕ್ಕಳು, ಮಹಿಳೆಯರು ಭಯವಿಲ್ಲದೆ ಹಾವಿಗೆ ಪೂಜೆ ಸಲ್ಲಿಸಿದರು.</p>.<p>'ಹಾವಿನ ಕುರಿತ ಭಯ, ಮೂಢನಂಬಿಕೆ ಹೋಗಲಾಡಿಸುವ ಉದ್ದೇಶದಿಂದ ಪ್ರತಿ ನಾಗರ ಪಂಚಮಿ ದಿನ ಜೀವಂತ ಹಾವಿಗೆ ಪೂಜೆ ಸಲ್ಲಿಸುತ್ತಿದ್ದೇನೆ. ಹಾವು ಕೇವಲ ನೀರು ಕುಡಿಯುತ್ತವೆ, ಹಾಲು ಕುಡಿಯುವುದಿಲ್ಲ ಎಂಬುದನ್ನೂ ಪೂಜೆ ವೇಳೆ ಜನರಿಗೆ ಮನವರಿಕೆ ಮಾಡಿಕೊಡುತ್ತೇನೆ' ಎಂದು ಪ್ರಶಾಂತ್ ಹೇಳಿದರು.</p>.<p>ತಾಲ್ಲೂಕಿನ ವಿವಿಧೆಡೆ ನಾಗರ ಕಟ್ಟೆಗೆ ಭಕ್ತರು ಪೂಜೆ ಸಲ್ಲಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ನೀಲೆಕಣಿಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ದೇವಾಲಯದ ಹೊರಗಿರುವ ನಾಗರ ಕಲ್ಲಿಗೆ ನೂರಾರು ಜನರು ಪೂಜೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>