ಎರಡು ದಿನಗಳಿಂದ ಹಲವರ ವಾಟ್ಸ್ಆ್ಯಪ್ಗೆ ಬರುತ್ತಿರುವ ಸಂದೇಶದಲ್ಲಿ, ‘ಜುಲೈ 20ರಂದು ಚಂಡಮಾರುತವು ಗೋವಾ, ಕಾರವಾರ ಅಥವಾ ರತ್ನಗಿರಿ ತೀರದ ಕಡಗೆ ಚಲಿಸಲು ಪ್ರಾರಂಭಿಸುತ್ತದೆ. 26ರವರೆಗೆ ದೊಡ್ಡ ಪ್ರಮಾಣದಲ್ಲಿ ಇರಲಿದೆ. ಜುಲೈ 20ರಂದು ಇಡೀ ಗೋವಾ ಕೊಂಕಣ, ಮುಂಬೈ, ಪುಣೆ, ಸತಾರಾ, ಕೊಲ್ಲಾಪುರದಲ್ಲಿ ಭಾರಿ ಮಳೆಯಾಗಲಿದೆ. ಇನ್ನು ಎಂಟು ದಿನ ಕೊಂಕಣ, ಗೋವಾ, ಗೋಕರ್ಣ, ಮುಂಬೈಗೆ ಯಾರೂ ಪ್ರವಾಸಕ್ಕೆ ಹೋಗಬಾರದು’ ಎಂದು ಬರೆಯಲಾಗಿದೆ.