<p><strong>ಶಿರಸಿ</strong>: ಕೊರೊನಾ ಸೋಂಕು ಸಮುದಾಯಕ್ಕೆ ಪ್ರಸರಣವಾಗುವುದನ್ನು ನಿಯಂತ್ರಿಸಲು, ಆಸ್ಪತ್ರೆ, ಔಷಧ ಅಂಗಡಿ, ಹಾಲು, ಹೋಟೆಲ್, ವಸತಿಗೃಹ ಹಾಗೂ ತೀರಾ ಅಗತ್ಯ ಸೌಲಭ್ಯ ಹೊರತುಪಡಿಸಿ, ನಗರದ ಇನ್ನುಳಿದ ಎಲ್ಲ ಅಂಗಡಿಗಳನ್ನು ಪ್ರತಿದಿನ ಸಂಜೆ 5 ಗಂಟೆಗೆ ಮುಚ್ಚಲು ಬುಧವಾರ ಇಲ್ಲಿ ನಡೆದ ವರ್ತಕರ ಸಭೆ ನಿರ್ಧರಿಸಿದೆ.</p>.<p>ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಭಾಗಗಳ ವರ್ತಕರು ಭಾಗವಹಿಸಿದ್ದರು. ತಾಲ್ಲೂಕಿನ ಅನೇಕ ಕೋವಿಡ್ ಪ್ರಕರಣಗಳು ದೃಢಪಟ್ಟಿರುವುದರಿಂದ, ಈ ಸಾಂಕ್ರಾಮಿಕ ಕಾಯಿಲೆಯ ನಿಯಂತ್ರಣಕ್ಕೆ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ, ನಗರದ ಎಲ್ಲ ಅಂಗಡಿಗಳ ಬಾಗಿಲು ಮುಚ್ಚಿ, ಅರ್ಧದಿನ ಲಾಕ್ಡೌನ್ ಮಾಡಬೇಕು ಎಂದು ಕೆಲವು ವ್ಯಾಪಾರಸ್ಥರು ಅಭಿಪ್ರಾಯಪಟ್ಟರು.</p>.<p>ಅನೇಕ ವರ್ತಕರು ಅಂಗಡಿ ಬಾಗಿಲು ತೆಗೆಯುವುದೇ ಬೆಳಿಗ್ಗೆ 10 ಗಂಟೆಯಾಗುತ್ತದೆ. 2 ಗಂಟೆಯವರೆಗೆ ಮಾತ್ರ ವಹಿವಾಟು ನಡೆದರೆ, ಪೇಟೆಯಲ್ಲಿ ಜನದಟ್ಟಣಿಯಾಗುತ್ತದೆ. ಹೀಗಾಗಿ, ಸಂಜೆಯ ತನಕ ಅವಕಾಶ ನೀಡಬೇಕು ಎಂದು ಇನ್ನು ಕೆಲವರು ಅಭಿಪ್ರಾಯವ್ಯಕ್ತಪಡಿಸಿದರು. ಅಂತಿಮವಾಗಿ ಜುಲೈ 31ರವರೆಗೆ, ಪ್ರತಿದಿನ ಸಂಜೆ 5 ಗಂಟೆಗೆ ತರಕಾರಿ ಸೇರಿದಂತೆ ಎಲ್ಲ ಅಂಗಡಿಗಳ ಬಾಗಿಲು ಹಾಕಿ, ಮರುದಿನ ಬೆಳಿಗ್ಗೆಯವರೆಗೆ ಲಾಕ್ಡೌನ್ ಮಾಡಲು ನಿರ್ಧರಿಸಲಾಯಿತು.</p>.<p>‘ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಅಂಗಡಿಗಳಲ್ಲಿ ಸ್ಯಾನಿಟೈಸರ್ ಬಳಸಬೇಕು. ನಗರಸಭೆ ಮತ್ತು ಪೊಲೀಸರ ತಂಡ ಅಂಗಡಿಗಳಿಗೆ ಭೇಟಿ ನೀಡಿ ಇದನ್ನು ಪರಿಶೀಲಿಸುತ್ತದೆ. ಶಾರೀರಿಕ ಅಂತರ ಕಾಪಾಡಿಕೊಳ್ಳುವುದು ಅತಿ ಮಹತ್ವದ್ದು’ ಎಂದು ಈಶ್ವರ ಉಳ್ಳಾಗಡ್ಡಿ ಹೇಳಿದರು.</p>.<p>‘ಸಂಜೆ 5 ಗಂಟೆಗೆ ಅಂಗಡಿ ಬಂದ್ ಮಾಡಲು ಎಲ್ಲರೂ ಸಹಕರಿಸಬೇಕು. ನಿಯಮ ಪಾಲನೆ ಮಾಡದ ಅಂಗಡಿಗಳ ಬಾಗಿಲು ಮುಚ್ಚಿಸುವ ಮೂಲಕ ಅವರಿಗೆ ಶಿಕ್ಷೆ ನೀಡಬೇಕು. ಆಗ, ಎಲ್ಲರೂ ಜಾಗೃತಿ ಮೂಡುತ್ತದೆ’ ಎಂದು ಡಿವೈಎಸ್ಪಿ ಜಿ.ಟಿ.ನಾಯಕ ಹೇಳಿದರು.</p>.<p>‘ಕಟ್ಟಡ ಕಾರ್ಮಿಕರು ಕೆಲಸ ಮುಗಿಸಿ, ಸಂಜೆ 6 ಗಂಟೆಗೆ ಮನೆಗೆ ತೆರಳುತ್ತಾರೆ. ಅವರಿಗೆ ಪೊಲೀಸರಿಂದ ತೊಂದರೆ ಆಗಬಾರದು’ ಎಂದು ಎಂಜಿನಿಯರಿಂಗ್ ಅಸೋಸಿಯೇಷನ್ ಪ್ರಮುಖ ಚಂದನ ಪೈ ಹೇಳಿದರು.</p>.<p>ವಿವಿಧ ವಿಭಾಗಗಳ ವರ್ತಕರ ಸಂಘಟನೆ ಪ್ರಮುಖರಾದ ಜಿ.ಜಿ.ಹೆಗಡೆ ಕಡೆಕೋಡಿ, ಈಶ್ವರ ನಾಯ್ಕ, ಪ್ರೇಮಕುಮಾರ ಮಾಳವದೆ, ಮಾಧವ ರೇವಣಕರ, ಶ್ರೀಪಾದ ಹೆಗಡೆ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ಕೊರೊನಾ ಸೋಂಕು ಸಮುದಾಯಕ್ಕೆ ಪ್ರಸರಣವಾಗುವುದನ್ನು ನಿಯಂತ್ರಿಸಲು, ಆಸ್ಪತ್ರೆ, ಔಷಧ ಅಂಗಡಿ, ಹಾಲು, ಹೋಟೆಲ್, ವಸತಿಗೃಹ ಹಾಗೂ ತೀರಾ ಅಗತ್ಯ ಸೌಲಭ್ಯ ಹೊರತುಪಡಿಸಿ, ನಗರದ ಇನ್ನುಳಿದ ಎಲ್ಲ ಅಂಗಡಿಗಳನ್ನು ಪ್ರತಿದಿನ ಸಂಜೆ 5 ಗಂಟೆಗೆ ಮುಚ್ಚಲು ಬುಧವಾರ ಇಲ್ಲಿ ನಡೆದ ವರ್ತಕರ ಸಭೆ ನಿರ್ಧರಿಸಿದೆ.</p>.<p>ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಭಾಗಗಳ ವರ್ತಕರು ಭಾಗವಹಿಸಿದ್ದರು. ತಾಲ್ಲೂಕಿನ ಅನೇಕ ಕೋವಿಡ್ ಪ್ರಕರಣಗಳು ದೃಢಪಟ್ಟಿರುವುದರಿಂದ, ಈ ಸಾಂಕ್ರಾಮಿಕ ಕಾಯಿಲೆಯ ನಿಯಂತ್ರಣಕ್ಕೆ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ, ನಗರದ ಎಲ್ಲ ಅಂಗಡಿಗಳ ಬಾಗಿಲು ಮುಚ್ಚಿ, ಅರ್ಧದಿನ ಲಾಕ್ಡೌನ್ ಮಾಡಬೇಕು ಎಂದು ಕೆಲವು ವ್ಯಾಪಾರಸ್ಥರು ಅಭಿಪ್ರಾಯಪಟ್ಟರು.</p>.<p>ಅನೇಕ ವರ್ತಕರು ಅಂಗಡಿ ಬಾಗಿಲು ತೆಗೆಯುವುದೇ ಬೆಳಿಗ್ಗೆ 10 ಗಂಟೆಯಾಗುತ್ತದೆ. 2 ಗಂಟೆಯವರೆಗೆ ಮಾತ್ರ ವಹಿವಾಟು ನಡೆದರೆ, ಪೇಟೆಯಲ್ಲಿ ಜನದಟ್ಟಣಿಯಾಗುತ್ತದೆ. ಹೀಗಾಗಿ, ಸಂಜೆಯ ತನಕ ಅವಕಾಶ ನೀಡಬೇಕು ಎಂದು ಇನ್ನು ಕೆಲವರು ಅಭಿಪ್ರಾಯವ್ಯಕ್ತಪಡಿಸಿದರು. ಅಂತಿಮವಾಗಿ ಜುಲೈ 31ರವರೆಗೆ, ಪ್ರತಿದಿನ ಸಂಜೆ 5 ಗಂಟೆಗೆ ತರಕಾರಿ ಸೇರಿದಂತೆ ಎಲ್ಲ ಅಂಗಡಿಗಳ ಬಾಗಿಲು ಹಾಕಿ, ಮರುದಿನ ಬೆಳಿಗ್ಗೆಯವರೆಗೆ ಲಾಕ್ಡೌನ್ ಮಾಡಲು ನಿರ್ಧರಿಸಲಾಯಿತು.</p>.<p>‘ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಅಂಗಡಿಗಳಲ್ಲಿ ಸ್ಯಾನಿಟೈಸರ್ ಬಳಸಬೇಕು. ನಗರಸಭೆ ಮತ್ತು ಪೊಲೀಸರ ತಂಡ ಅಂಗಡಿಗಳಿಗೆ ಭೇಟಿ ನೀಡಿ ಇದನ್ನು ಪರಿಶೀಲಿಸುತ್ತದೆ. ಶಾರೀರಿಕ ಅಂತರ ಕಾಪಾಡಿಕೊಳ್ಳುವುದು ಅತಿ ಮಹತ್ವದ್ದು’ ಎಂದು ಈಶ್ವರ ಉಳ್ಳಾಗಡ್ಡಿ ಹೇಳಿದರು.</p>.<p>‘ಸಂಜೆ 5 ಗಂಟೆಗೆ ಅಂಗಡಿ ಬಂದ್ ಮಾಡಲು ಎಲ್ಲರೂ ಸಹಕರಿಸಬೇಕು. ನಿಯಮ ಪಾಲನೆ ಮಾಡದ ಅಂಗಡಿಗಳ ಬಾಗಿಲು ಮುಚ್ಚಿಸುವ ಮೂಲಕ ಅವರಿಗೆ ಶಿಕ್ಷೆ ನೀಡಬೇಕು. ಆಗ, ಎಲ್ಲರೂ ಜಾಗೃತಿ ಮೂಡುತ್ತದೆ’ ಎಂದು ಡಿವೈಎಸ್ಪಿ ಜಿ.ಟಿ.ನಾಯಕ ಹೇಳಿದರು.</p>.<p>‘ಕಟ್ಟಡ ಕಾರ್ಮಿಕರು ಕೆಲಸ ಮುಗಿಸಿ, ಸಂಜೆ 6 ಗಂಟೆಗೆ ಮನೆಗೆ ತೆರಳುತ್ತಾರೆ. ಅವರಿಗೆ ಪೊಲೀಸರಿಂದ ತೊಂದರೆ ಆಗಬಾರದು’ ಎಂದು ಎಂಜಿನಿಯರಿಂಗ್ ಅಸೋಸಿಯೇಷನ್ ಪ್ರಮುಖ ಚಂದನ ಪೈ ಹೇಳಿದರು.</p>.<p>ವಿವಿಧ ವಿಭಾಗಗಳ ವರ್ತಕರ ಸಂಘಟನೆ ಪ್ರಮುಖರಾದ ಜಿ.ಜಿ.ಹೆಗಡೆ ಕಡೆಕೋಡಿ, ಈಶ್ವರ ನಾಯ್ಕ, ಪ್ರೇಮಕುಮಾರ ಮಾಳವದೆ, ಮಾಧವ ರೇವಣಕರ, ಶ್ರೀಪಾದ ಹೆಗಡೆ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>