<p><strong>ಕಾರವಾರ: </strong>ಇಲ್ಲಿನ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಅಂಗವಾಗಿ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಯು ಡಿ.18ರಂದು ಆರಂಭವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಂಚಾರ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಶಂಕರ ಮಾರಿಹಾಳ ನೇತೃತ್ವದಲ್ಲಿ ಮಂಗಳವಾರ ಮೀನುಗಾರರೊಂದಿಗೆ ಸೌಹಾರ್ದತಾ ಸಭೆ ಹಮ್ಮಿಕೊಳ್ಳಲಾಯಿತು.</p>.<p>‘ಸಾಗರಮಾಲಾ’ ಯೋಜನೆಯಭಾಗವಾದ ಈ ಕಾಮಗಾರಿಗೆಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಮೀನುಗಾರರ ಮನವೊಲಿಕೆ ಮಾಡಲುಪೊಲೀಸರು ಸಭೆ ಹಮ್ಮಿಕೊಂಡಿದ್ದರು.</p>.<p>ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ‘ನೌಕಾನೆಲೆ ಯೋಜನೆಗೆ ಭೂಮಿ ತ್ಯಾಗ ಮಾಡಿದವರು ಈಗ ಟ್ಯಾಗೋರ್ ಕಡಲತೀರವನ್ನೇ ಅವಲಂಬಿಸಿದ್ದಾರೆ. ₹ 40ಕೋಟಿ ಆದಾಯದ ಆಸೆಗೆ ₹ 4 ಸಾವಿರ ಕೋಟಿ ಆದಾಯ ತರುವ ಮೀನುಗಾರಿಕಾ ಚಟುವಟಿಕೆಯ ಮೇಲೆ ಹೊಡೆತ ನೀಡುವುದು ಸರಿಯಲ್ಲ’ ಎಂದರು.</p>.<p class="Subhead">‘ತರಾತುರಿ ಬೇಡ’: ‘ಈ ಯೋಜನೆಯ ಬಗ್ಗೆ ಮೀನುಗಾರಿಕಾ ಸಚಿವರು, ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಹಮ್ಮಿಕೊಳ್ಳಬೇಕು. ನಂತರವೇ ಕಾಮಗಾರಿ ನಡೆಸುವ ಬಗ್ಗೆ ನಿರ್ಧಾರವಾಗಲಿ. ಅಲ್ಲಿಯವರೆಗೂ ಕೆಲಸ ಮಾಡಲು ತರಾತುರಿ ಬೇಡ’ ಎಂದು ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಆಗ್ರಹಿಸಿದರು.</p>.<p>ಮೀನುಗಾರಿಕಾ ಧುರೀಣ ಕೆ.ಟಿ.ತಾಂಡೇಲ್, ‘ಅಲೆ ತಡೆಗೋಡೆ ನಿರ್ಮಾಣದಿಂದ ಕಡಲತೀರಕ್ಕೆ ಹಾನಿಯಾಗಲಿದೆ.ಯೋಜನೆಗೆ ನಮ್ಮ ಭಾರಿ ವಿರೋಧವಿದೆ’ ಎಂದು ಸ್ಪಷ್ಟಪಡಿಸಿದರು.</p>.<p>ಮುಖಂಡ ರಾಜು ತಾಂಡೇಲ್ ಮಾತನಾಡಿ, ‘ಸಾರ್ವಜನಿಕರ ವಿರೋಧವಿದ್ದೂಬಂದರು ವಿಸ್ತರಣೆಮಾಡುವುದುಸರಿಯಲ್ಲ. ಸರ್ಕಾರ ಯೋಜನೆಯನ್ನು ಹಿಂಪಡೆಯದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಪ್ರಸಾದ ಕಾರವಾರಕರ್,ರಮಾಕಾಂತ ಗಾಂವಕರ್ ಮಾತನಾಡಿದರು.</p>.<p>ಡಿವೈಎಸ್ಪಿಶಂಕರ ಮಾರಿಹಾಳ ಮಾತನಾಡಿ, ‘ಅಲೆ ತಡೆಗೋಡೆ ಕಾಮಗಾರಿ ಆರಂಭಿಸಲು ಬಂದರುಇಲಾಖೆ ಸಿದ್ಧತೆ ಮಾಡಿಕೊಂಡಿದೆ.ರಕ್ಷಣೆ ನೀಡುವಂತೆ ತಿಳಿಸಿದೆ. ಮೀನುಗಾರರು ಪ್ರತಿಭಟಿಸದೇಶಾಂತವಾಗಿರಬೇಕು’ ಎಂದು ಮನವಿ ಮಾಡಿದರು.</p>.<p>ಸಿಪಿಐ ಸಂತೋಷ್ ಶೆಟ್ಟಿ ಮಾತನಾಡಿ, ಎಲ್ಲರೂ ಕಾನುನು ಪಾಲಿಸಬೇಕಿದ್ದು, ಅಹಿತಕರ ಘಟನೆಗೆ ಆಸ್ಪದ ಕೊಡಬಾರದು ಎಂದರು.</p>.<p>ಎಸ್ಐಗಳಾದ ಸಂತೋಷಕುಮಾರ್.ಎಂ., ಎನ್.ಡಿ.ಜಕ್ಕಣ್ಣನವರ್ ಇದ್ದರು. ನಗರಸಭೆ ಸದಸ್ಯರಾದ ರೇಷ್ಮಾ ಮಾಳ್ಸೇಕರ್, ರಾಜೇಶ ಮಾಜಾಳಿಕರ್, ಮೀನುಗಾರ ಪ್ರಮುಖರಾದ ಚೇತನ ಹರಿಕಂತ್ರ ಹಾಗೂ ಹಲವು ಮೀನುಗಾರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಇಲ್ಲಿನ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಅಂಗವಾಗಿ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಯು ಡಿ.18ರಂದು ಆರಂಭವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಂಚಾರ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಶಂಕರ ಮಾರಿಹಾಳ ನೇತೃತ್ವದಲ್ಲಿ ಮಂಗಳವಾರ ಮೀನುಗಾರರೊಂದಿಗೆ ಸೌಹಾರ್ದತಾ ಸಭೆ ಹಮ್ಮಿಕೊಳ್ಳಲಾಯಿತು.</p>.<p>‘ಸಾಗರಮಾಲಾ’ ಯೋಜನೆಯಭಾಗವಾದ ಈ ಕಾಮಗಾರಿಗೆಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಮೀನುಗಾರರ ಮನವೊಲಿಕೆ ಮಾಡಲುಪೊಲೀಸರು ಸಭೆ ಹಮ್ಮಿಕೊಂಡಿದ್ದರು.</p>.<p>ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ‘ನೌಕಾನೆಲೆ ಯೋಜನೆಗೆ ಭೂಮಿ ತ್ಯಾಗ ಮಾಡಿದವರು ಈಗ ಟ್ಯಾಗೋರ್ ಕಡಲತೀರವನ್ನೇ ಅವಲಂಬಿಸಿದ್ದಾರೆ. ₹ 40ಕೋಟಿ ಆದಾಯದ ಆಸೆಗೆ ₹ 4 ಸಾವಿರ ಕೋಟಿ ಆದಾಯ ತರುವ ಮೀನುಗಾರಿಕಾ ಚಟುವಟಿಕೆಯ ಮೇಲೆ ಹೊಡೆತ ನೀಡುವುದು ಸರಿಯಲ್ಲ’ ಎಂದರು.</p>.<p class="Subhead">‘ತರಾತುರಿ ಬೇಡ’: ‘ಈ ಯೋಜನೆಯ ಬಗ್ಗೆ ಮೀನುಗಾರಿಕಾ ಸಚಿವರು, ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಹಮ್ಮಿಕೊಳ್ಳಬೇಕು. ನಂತರವೇ ಕಾಮಗಾರಿ ನಡೆಸುವ ಬಗ್ಗೆ ನಿರ್ಧಾರವಾಗಲಿ. ಅಲ್ಲಿಯವರೆಗೂ ಕೆಲಸ ಮಾಡಲು ತರಾತುರಿ ಬೇಡ’ ಎಂದು ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಆಗ್ರಹಿಸಿದರು.</p>.<p>ಮೀನುಗಾರಿಕಾ ಧುರೀಣ ಕೆ.ಟಿ.ತಾಂಡೇಲ್, ‘ಅಲೆ ತಡೆಗೋಡೆ ನಿರ್ಮಾಣದಿಂದ ಕಡಲತೀರಕ್ಕೆ ಹಾನಿಯಾಗಲಿದೆ.ಯೋಜನೆಗೆ ನಮ್ಮ ಭಾರಿ ವಿರೋಧವಿದೆ’ ಎಂದು ಸ್ಪಷ್ಟಪಡಿಸಿದರು.</p>.<p>ಮುಖಂಡ ರಾಜು ತಾಂಡೇಲ್ ಮಾತನಾಡಿ, ‘ಸಾರ್ವಜನಿಕರ ವಿರೋಧವಿದ್ದೂಬಂದರು ವಿಸ್ತರಣೆಮಾಡುವುದುಸರಿಯಲ್ಲ. ಸರ್ಕಾರ ಯೋಜನೆಯನ್ನು ಹಿಂಪಡೆಯದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಪ್ರಸಾದ ಕಾರವಾರಕರ್,ರಮಾಕಾಂತ ಗಾಂವಕರ್ ಮಾತನಾಡಿದರು.</p>.<p>ಡಿವೈಎಸ್ಪಿಶಂಕರ ಮಾರಿಹಾಳ ಮಾತನಾಡಿ, ‘ಅಲೆ ತಡೆಗೋಡೆ ಕಾಮಗಾರಿ ಆರಂಭಿಸಲು ಬಂದರುಇಲಾಖೆ ಸಿದ್ಧತೆ ಮಾಡಿಕೊಂಡಿದೆ.ರಕ್ಷಣೆ ನೀಡುವಂತೆ ತಿಳಿಸಿದೆ. ಮೀನುಗಾರರು ಪ್ರತಿಭಟಿಸದೇಶಾಂತವಾಗಿರಬೇಕು’ ಎಂದು ಮನವಿ ಮಾಡಿದರು.</p>.<p>ಸಿಪಿಐ ಸಂತೋಷ್ ಶೆಟ್ಟಿ ಮಾತನಾಡಿ, ಎಲ್ಲರೂ ಕಾನುನು ಪಾಲಿಸಬೇಕಿದ್ದು, ಅಹಿತಕರ ಘಟನೆಗೆ ಆಸ್ಪದ ಕೊಡಬಾರದು ಎಂದರು.</p>.<p>ಎಸ್ಐಗಳಾದ ಸಂತೋಷಕುಮಾರ್.ಎಂ., ಎನ್.ಡಿ.ಜಕ್ಕಣ್ಣನವರ್ ಇದ್ದರು. ನಗರಸಭೆ ಸದಸ್ಯರಾದ ರೇಷ್ಮಾ ಮಾಳ್ಸೇಕರ್, ರಾಜೇಶ ಮಾಜಾಳಿಕರ್, ಮೀನುಗಾರ ಪ್ರಮುಖರಾದ ಚೇತನ ಹರಿಕಂತ್ರ ಹಾಗೂ ಹಲವು ಮೀನುಗಾರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>