ನಗರದ ದೇವಿಕೆರೆ, ಝೂ ವೃತ್ತ, ಮಾರಿಗುಡಿ, ಶಿವಾಜಿಚೌಕ, ಡ್ರೈವರ್ ಕಟ್ಟೆ, ಮಾರ್ಕೆಟ್, ರಾಯರಪೇಟೆ, ಸಿಂಪಿಗಲ್ಲಿ, ಉಣ್ಣೇಮಠ ಗಲ್ಲಿ, ಬಾಪೂಜಿ ನಗರ, ಟಿಎಸ್ಎಸ್ ರಸ್ತೆ, ಹನುಮಗಿರಿ, ಮರಾಠಿಕೊಪ್ಪ ಮೊದಲಾದ ಕಡೆಗಳಲ್ಲಿ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಲು ಮಂಟಪಗಳು ತಲೆಯೆತ್ತಿವೆ. ನಗರದಲ್ಲಿ 15ಕ್ಕೂ ಹೆಚ್ಚು ಗುಡಿಗಾರರು ಮೂರ್ತಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಸೆ.1ರಂದು ನಡೆಯುವ ಗೌರಿ ಹಬ್ಬಕ್ಕೆ ಮನೆ–ಮನೆ ಹೋಗಲು ಗೌರಿ ಸಿದ್ಧಳಾಗಿದ್ದಾಳೆ.