ಉಳಿದ ಆರೋಪಿಗಳಾದ ಗುಂದ ಮಳೆ ಗ್ರಾಮದ ಮಂಜು ಜಾನು ಮುಸ್ಕಾರ, ಪಲಸವಾಡೆಯ ಆನಂದ ಗಣೇಶ ಮುಸ್ಕಾರ ಹಾಗೂ ಮಾತ್ಕರಣಿಯ ಲಕ್ಷ್ಮಣ ಬಿಲ್ಲೇಕರ್ ಪರಾರಿಯಾಗಿದ್ದಾರೆ. ಇವರೂ ಸೋಂಕು ಶಂಕಿತನ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯಿದ್ದು,ಸಾಂಕ್ರಾಮಿಕ ರೋಗ ತಡೆಗಟ್ಟುವ ಕಾಯ್ದೆಯ ಉಲ್ಲಂಘನೆಯಾಗಿದೆ. ಆದ್ದರಿಂದ, ಆರೋಪಿಗಳ ವಿರುದ್ಧ ಜೊಯಿಡಾ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.